Saturday, August 9, 2025

ಧರ್ಮಸ್ಥಳ: ಅಂಧಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲು ಬಡಿತವೂ!

 ಧರ್ಮಸ್ಥಳ: ಅಂಧಭಕ್ತರ ಸಾಂತ್ವಾನವೂ ಪ್ರಸಾದಪ್ರಿಯರ ಡೋಲು ಬಡಿತವೂ!

ಇಡೀ ದೇಶ ಮತ್ತು ದೇಶಗಳಾಚೆ ಗಮನ ಸೆಳೆದಿರುವ ಧರ್ಮಸ್ಥಳ ಬೃಹತ್ ಪ್ರಮಾಣದ ಅತ್ಯಾಚಾರ ಮತ್ತು ಹತ್ಯೆಗಳಿಗೆ ಸಂಬಂಧಿಸಿದಂತೆ ಎಸ್.ಐ.ಟಿ. ರಚನೆಯಾಗಿ ತನ್ನ ಕಾರ್ಯವನ್ನು ನಡೆಸುತ್ತಿದೆ. ತಕ್ಕಮಟ್ಟಿನ ಸಾಕ್ಷಿಪುರಾವೆಗಳು ಸಿಗುತ್ತಿರುವ ಈ ಸಂದರ್ಭದಲ್ಲಿ:


ಮನುಷ್ಯತ್ವ ಹೊಂದಿರುವ ಯಾರಿಗೇ ಆಗಲಿ ಸತ್ತುಹೋಗಿರುವ ಜೀವಗಳ ಬಗ್ಗೆ ʻಅಯ್ಯೋ ಅನ್ನಿಸದಿರದು. ಮತ್ತು ಇದನ್ನು ಮಾಡಿದವರು ಯಾರೇ ಆಗಿರಲಿ ಅವರ ಬಗ್ಗೆ ರೋಷ ಉಕ್ಕದಿರದು. ಆದರೆ ಇಂತಹ ಸಂದರ್ಭದಲ್ಲಿಯೂ ಬಲಾಢ್ಯರ ಬಾಲಬಡುಕರು ಧಣಿಗಳ ಪರವಾಗಿ ಡೋಲು ಹೊಡೆಯುವುದನ್ನು ನಿಲ್ಲಿಸಿಲ್ಲ ಎಂಬುದನ್ನು ನಾವು ಗಮನಿಸಬೇಕು. ಹೀಗೆ ಡೋಲು ಹೊಡೆಯುವವರಲ್ಲಿ ಎರಡು ರೀತಿ ಇರಬಹುದು. ಒಂದು ಬಲಾಢ್ಯ ಆರೋಪಿಗಳಿಂದ ʼಪ್ರಸಾದʼ ಪಡೆದವರು. ಇನ್ನೊಂದು ರೀತಿಯವರು ಈ ಬಲಾಢ್ಯರನ್ನು ʼದೇವರೆಂದೋʼ ʼದೇವಮಾನವರೆಂದೋʼ ತಿಳಿದುಕೊಂಡಿರುವ ಅಂಧಭಕ್ತರು.

ಮೊದಲು ಅಂಧಭಕ್ತರ ಬಗ್ಗೆ ನೋಡೋಣ. ಇಂತಹ ಅಂಧಭಕ್ತರಿದ್ದದ್ದರಿಂದಲೇ ಅನೇಕ ಬಲಾಢ್ಯರು ನಿರಾತಂಕವಾಗಿ ಅಪರಾಧ ಕೃತ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಅಂಧಭಕ್ತರಿಗೆ ಅವರ ಅಕ್ಕತಂಗಿಯರನ್ನೋ ಹೆಂಡತಿಯರನ್ನೋ ಈ ರಾಕ್ಷಸರು ಎಳೆದೊಯ್ದಾಗ ಮಾತ್ರ ʼಸತ್ಯʼ ಅರಿವಿಗೆ ಬರಬಹುದು ಅಥವಾ ಆಗಲೂ ಬರದೇ ಇರಬಹುದು. ಅಂತಹ ಅಂಧಭಕ್ತರು ʼನೀವು ಧೈರ್ಯವಾಗಿರಿ ನಾವು ನಿಮ್ಮೊಂದಿಗಿದ್ದೇವೆʼ ಎಂದು ನಡುಕ ಹುಟ್ಟಿರುವವರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಇದು ಧರ್ಮಸ್ಥಳ ಮಾತ್ರವಲ್ಲ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ, ಅಪರಾಧ ಕೃತ್ಯಗಳಿಗೆ ತಳುಕುಹಾಕಿಕೊಂಡಿರುವ ದೇವಮಾನವರ ಬಗ್ಗೆ ಇಂತಹ ಅಂಧಭಕ್ತರು ತೋರುವ ಕನಿಕರವಾಗಿದೆ. ಚಿತ್ರದುರ್ಗದ ಸ್ವಾಮಿಯ ವಿಷಯದಲ್ಲೂ ಇವರು ಹೀಗೆ ಮಾಡಿದರು. ಕೊನೆಗೆ ಹಂತಹಂತವಾಗಿ ದೂರವಾದರು. ಇಂತಹವರು ತಮ್ಮ ಅಂಧವಿಶ್ವಾಸವನ್ನು ಬಿಟ್ಟು ಕಣ್ಣುತೆರೆದು ನೋಡಬೇಕು.

ಅಷ್ಟಕ್ಕೂ ಇಂತಹವರೇ ಅಪರಾಧಿಗಳು ಎಂದು ಯಾರೂ ಹೇಳುತ್ತಿಲ್ಲ. ಅಪರಾಧ ನಡೆದಿದೆ ಎಂದರೆ ಅಪರಾಧಿ ಇದ್ದೇ ಇರುತ್ತಾರಲ್ಲ. ಅವರನ್ನು ಹಿಡಿಯಿರಿ ಎಂದಷ್ಟೇ ಹೇಳುತ್ತಿದ್ದಾರೆ. ಒಂದು ವೇಳೆ ಯಾರಾದರೂ ಯಾರ ಹೆಸರನ್ನಾದರೂ ಅಪರಾಧಿ ಎಂದು ಆರೋಪಿಸಿದ್ದರೆ ಅವರು ಏನಾದರೂ ಒಂದಿಷ್ಟು ಸಾಕ್ಷಿ ಪುರಾವೆ ಇಟ್ಟುಕೊಂಡೇ ಹೇಳಿರುತ್ತಾರೆ. ಅವರ ಹತ್ತಿರ ಅಷ್ಟಾದರೂ ಇದೆ. ಅವರು ಅಪರಾಧಿಗಳಲ್ಲ ಎಂದು ಹೇಳಲು ಇವರ ಹತ್ತಿರ ಅಂಧ ಅಭಿಮಾನ ಬಿಟ್ಟು ಇನ್ನೇನಿದೆ ಮಣ್ಣು. ಇಂತಹವರು ಈ ಹಂತದಲ್ಲಿಯಾದರೂ ತೆಪ್ಪಗಿರುವುದ ಒಳ್ಳೆಯದು.

ಇನ್ನು ʼಪ್ರಸಾದʼಪ್ರಿಯರು. ಅವರದ್ದು ಬಿಜಿನೆಸ್. ಅಬರ ಬಗ್ಗೆ ಬಹಳ ಮಾತನಾಡಲಾಗದು. ಇವರು ಆರಂಭದಿಂದ ಇಲ್ಲಿಯತನಕ ಈ ಅಪರಾಧಕೃತ್ಯಗಳಿಗೆ ಬೆಂಬಲ ಕೊಟ್ಟುಕೊಂಡು ಡೋಲು ಬಾರಿಸುತ್ತ ಬಂದದ್ದರಿಂದಲೇ ಈ ಪ್ರಕರಣ ಇಷ್ಟು ದೊಡ್ಡದಾಗಿದೆ ಮತ್ತು ನೂರಾರು ಹೆಣ್ಣುಮಕ್ಕಳ ಸಾವಿನಂತಹ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಈಗಲೂ ಇವರು ಡೋಲು ಹೊಡೆಯುವುದನ್ನು ನಿಲ್ಲಿಸದಿದ್ದರೆ ಇವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈಗ ಜನರ ಗಮನ ದೊಡ್ಡ ಮೀನುಗಳನ್ನು ಹಿಡಿಯುವುದರ ಕಡೆಗೆ ಇದೆ. ಹಾಗಾಗಿ ಇವರ ಕಡೆ ಅವರ ಗಮನ ಅಷ್ಟಾಗಿ ಹರಿಯುತ್ತಿಲ್ಲ.

ಆದರೆ ಜನ ಇವರನ್ನು ಗಮನಿಸುತ್ತಿದ್ದಾರೆ. ನಾಳೆ ದೊಡ್ಡ ಮೀನುಗಳನ್ನು ಹಿಡಿದ ಮೇಲೆ ಇವರ ಕಡೆ ಗಮನ ಬಂದೇ ಬರುತ್ತದೆ.
ಕಾನೂನಿನ ಪ್ರಕಾರವೇ ಸಂಬಂಧಿಸಿದವರಿಗೆ ಶಿಕ್ಷೆ ಆಗಬೇಕು. ಅದಕ್ಕಾಗಿಯೇ ತಮ್ಮ ಎದೆಯೊಳಗಿನ ಬೆಂಕಿಯನ್ನು ಒತ್ತಿಹಿಡಿದುಕೊಂಡು ಜನ ಸುಮ್ಮನಿದ್ದಾರೆ. ಅದನ್ನು ಇವರೆಲ್ಲ ಅರ್ಥಮಾಡಿಕೊಳ್ಳಬೇಕು. ಒಂದುವೇಳೆ ಇವರು ಇನ್ನೂ ಏನೇನೋ ಕುತಂತ್ರಗಳನ್ನು ಮಾಡಿ ನ್ಯಾಯಾಲಯದಿಂದಲೂ ತಪ್ಪಿಸಿಕೊಂಡರು ಎಂದು ಇಟ್ಟುಕೊಳ್ಳಿ. ಆಗ ಜನ ಇವರನ್ನು ಸುಮ್ಮನೆ ಬಿಡುತ್ತಾರೆಯೇ?
ಎಸ್.ಐ.ಟಿ ಅವರು ನೆಲವನ್ನು ಅಗೆಯುವುದಕ್ಕೆ ಮೊದಲು ಈ ಡೋಲು ಬಡಿಯುವವರನ್ನು ಎಳೆದುಕೊಂಡು ಹೋಗಿ ಕುಂಡಿಯ ಮೇಲೆ ನಾಲ್ಕು ಬಾರಿಸಿದ್ದರೆ ಎಲ್ಲ ಸತ್ಯವೂ ಹೊರಗೆ ಬರುತ್ತಿತ್ತೇನೋ. ಆದರೆ ಹಾಗೆ ಮಾಡಲು ಬರುವುದಿಲ್ಲವಾದ್ದರಿಂದ ಅದನ್ನು ಅವರು ಮಾಡಿಲ್ಲ ಅನ್ನಿಸುತ್ತದೆ.

ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆ ಆಗಿ ಸಂಬಂಧಿಸಿದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಬಯಸುವ ಸ್ನೇಹಿತರಲ್ಲಿ ವಿನಂತಿ. ಹೀಗೆ ಡೋಲು ಹೊಡೆಯುವವರು ಜಾಲತಾಣಗಳಲ್ಲಿ ಹಾಕುವ ಪೋಸ್ಟ್ ಗಳು ಮಾಡುವ ವಿಡಿಯೋಗಳು, ನೀಡುವ ಹೇಳಿಕೆಗಳು ಎಲ್ಲವನ್ನು ಓದಿ ಸುಮ್ಮನೆ ಬಿಡಬೇಡಿ. ದಯವಿಟ್ಟು ಅವನ್ನು ಎಸ್. ಐ.ಟಿ.ಗೆ ಕಳಿಸಿಕೊಡಿ. ಸಂದರ್ಭ ಬಂದರೆ ಅವರು ಬಂದು ಇವರನ್ನು ಕುಂಡಿಯ ಮೇಲೆ ನಾಲ್ಕು ಬಿಗಿದು ಎಳೆದುಕೊಂಡು ಹೋಗುತ್ತಾರೆ. ಅಷ್ಟಾದರೂ ನಾವು ಮಾಡದಿದ್ದರೆ ಹೇಗೆ. ನಾನಂತೂ ಹೀಗೆ ನನ್ನ ಗಮನಕ್ಕೆ ಬರುವ ಇವರ ಹೇಳಿಕೆಗಳನ್ನು ಪೋಸ್ಟ್ಗಳನ್ನು ಕಳಿಸುತ್ತೇನೆ. .

ಎಸ್. ಐ. ಟಿ. ಸಂಪರ್ಕ:
WhatsApp: 8277986369,
Telephone : 0824-2005301
email : sitdps@ksp.gov.in.

ರಾಬು
02-08-2025

*****
ಇದೇ ಪ್ರಕರಣದ ಬಗ್ಗೆ ಇರುವ ಈ ಲೇಖನಗಳನ್ನೂ ನೀವು ಅವುಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ಓದಬಹುದು
ಧರ್ಮಸ್ಥಳ: ಕುರುಕ್ಷೇತ್ರವಾದ ಧರ್ಮಕ್ಷೇತ್ರವೂ ಗೂಂಡಾಭಕ್ತರ ಹೇಡಿಕೃತ್ಯವೂ:
https://buradikatti.blogspot.com/2025/08/blog-post_8.html

1 comment:

  1. Dharmasthala Dharmasthalavaagi ulidilla. Alli mosaadnnu meerida network ide. Yaaraadaro, virodhigalendu kandubandare naalege avanu naapatthe.. Hinde vomme 60-70 varsha hinde irabahudu. Devasthaanakke money order barutthade. Kelavadaralli address, uda:Kukke subramanya Dharmasthala mangalore dakshina kannada endirutthade. Idu subramanya devasthaanakko athavaa dharmasthalakko.. Allina Rule postmaster anthaha address sariyillada MOgalannu return maadutthaa banda. Idu templenavarige gotthaagi hoyithu. Dharmasthala endiddudarinda Allina devasthaanakke kodabeku, illadiddalli nashtavaagutthade. Ee kaaranakke avanige ee bagge theevra bedarikeya sandesha muttithu. Koodale aa Postmaster raathro raathri jeevabhayadinda nethraavathi Nadinge haari eeji daati faraari.(praayasha aaga sethuve illavaagirabeku) Andina Dharmasthala indina Soumya koleyavaregoo haage itthu. Eega swalpa silent aagide..

    ReplyDelete