“ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರಾ”
ಹನ್ನೆರಡನೆಯ ಶತಮಾನದ
ಪ್ರಸಿದ್ಧ ವಚನಕಾರ,
ಶೂನ್ಯಪೀಠಾಧ್ಯಕ್ಷ ಅಲ್ಲಮನ
ವಚನವೊಂದರಲ್ಲಿ ಬರುವ
ಎರಡು
ಸಾಲುಗಳಿವು. `ಸುಳ್ಳನ್ನೇ ಬೆಳೆಯಾಗಿ ಬೆಳೆದು
ಪೈರಾಗಿ
ಕೊಯ್ದುಕೊಂಡು ಅದನ್ನೇ
ಪೂಜಿಸಿ
ಸಂಕಷ್ಟಕ್ಕೆ ಒಳಗಾದಿರಿ’ ಎಂಬರ್ಥದ ಈ
ಮಾತು,
ಸ್ವತಃ
ಅಲ್ಲಮನ
ಅಂಕಿತದ
ಒಂದು
ವಚನವೂ
ಸೇರಿದಂತೆ ಅನೇಕ
ಸುಳ್ಳು
ಮತ್ತು
ಜಳ್ಳು
ಸುದ್ಧಿಗಳು ನಮ್ಮ
ಸಾಮಾಜಿಕ ಮಾಧ್ಯಮಗಳ ಮೂಲಕ,
ಕೊರೊನಾ
ವೈರಾಣು
(ಕೋವಿಡ್19)
ವಿಗಿಂತ
ವೇಗವಾಗಿ ಮತ್ತು
ವ್ಯಾಪಕವಾಗಿ ನಮ್ಮ
ಸಮಾಜದಲ್ಲಿ ಹರಡಿ
ಸಮಾಜದ
ಜನಮಾನಸದಲ್ಲಿ ಅನಗತ್ಯ
ಭಯ,
ಆತಂಕ,
ಮೌಢ್ಯ
ಇವೆಲ್ಲಕ್ಕೂ ಮಿಗಿಲಾಗಿ ಕೋಮುದ್ವೇಷದಂತಹ ಕೆಟ್ಟ
ಭಾವನೆಗಳನ್ನು ಹರಡಿ
ಮನಸ್ಸುಗಳನ್ನು ಕೆಡಿಸುತ್ತಿರುವ ಈ
ಸಂದರ್ಭದಲ್ಲಿ ಸುಮ್ಮನೆ ನೆನಪಾದವು.
ಇಡೀ
ಜಗತ್ತನ್ನೆ ತಲ್ಲಣಗೊಳಿಸಿರುವ ಕೊರೊನಾ
ಬಿಕ್ಕಟ್ಟು ನಮ್ಮ
ದೇಶವನ್ನೂ ಅದರ
ಭಾಗವಾದ
ಕರ್ನಾಟಕವನ್ನು ಇತ್ತೀಚಿನ ದಿನಮಾನಗಳಲ್ಲಿ ಕಂಡರಿಯದಷ್ಟು ಹಿಂಡಿಹಿಪ್ಪೆ ಮಾಡುತ್ತಿದೆ. ಕಳೆದ
ಮೂರು
ತಿಂಗಳ
ಹಿಂದೆ
ಪ್ರಾರಂಭವಾದ ಅದರ
ದಾಳಿ
ಇನ್ನೂ
ನಿಂತಿಲ್ಲ. ಜಗತ್ತಿನ ಶಕ್ತಿಮಾನ್ ರಾಷ್ಟ್ರಗಳೆಲ್ಲ ಇಂದು
ಅದನ್ನು
ನಿಯಂತ್ರಿಸುವಲ್ಲಿ ತಮ್ಮ
ಶಕ್ತಿಯ
ತುದಿಯಂಚಿನವರೆಗೂ ಹೋಗಿ
ಶ್ರಮಿಸುತ್ತಿವೆ. ಭಾರತದಲ್ಲಿ ಕೂಡ
ಇದರ
ದಾಳಿ
ತೀವ್ರಗತಿಯನ್ನು ಪಡೆದುಕೊಳ್ಳದಿದ್ದರೂ ಅಲಕ್ಷಿಸುವ ರೀತಿಯಲ್ಲಂತೂ ಇಲ್ಲ.
ಈ
ಹಂತದಲ್ಲಿ ಕೇಂದ್ರ
ಸರ್ಕಾರ
ಮತ್ತು
ರಾಜ್ಯಸರ್ಕಾರಗಳು ಅವುಗಳ
ಅಧೀನ
ಸಂಸ್ಥೆ
ಮತ್ತು
ನೌಕರರು
ಹಗಲಿರುಳೆನ್ನದೆ ಅದರ
ವಿರುದ್ಧದ ಹೋರಾಟದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಂತಹ
ಸಂದರ್ಭದಲ್ಲಿ ಸಾಮಾನ್ಯ ಜನರ
ಪ್ರಜ್ಞಾವಂತಿಕೆಯ ಸಹಕಾರ
ಅತ್ಯಂತ
ಮಹತ್ವದ್ದು ಎಂದು
ಬೇರೆ
ಹೇಳಬೇಕಾಗಿಲ್ಲ. ಆದರೆ
ಆ
ಪ್ರಜ್ಞಾವಂತಿಕೆಯನ್ನು ಯಾವಮಟ್ಟದಲ್ಲಿ ನಾವೆಲ್ಲ ಪ್ರದರ್ಶಿಸಬೇಕಿತ್ತೋ ಆ
ಮಟ್ಟದಲ್ಲಿ ಪ್ರದರ್ಶಿಸಲಿಲ್ಲ ಎಂಬುದು
ಕೊರೋನಾ
ವೈರಾಣುವಿನ ಸುತ್ತ
ಕಳೆದ
ಹದಿನೈದು ಇಪ್ಪತ್ತು ದಿನಗಳಿಂದ ದೇಶದ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ
ದೇಶದ
ಲಕ್ಷೋಪಲಕ್ಷ ಜನರ
ಮನಸ್ಥಿತಿಯನ್ನೂ ಕಾಯಿಲೆ
ನಿಯಂತ್ರಣದ ಪರಿಸ್ಥಿತಿಯನ್ನೂ ಹಳಿತಪ್ಪಿಸುವ ಕಾರ್ಯಮಾಡಿದ ಸುಳ್ಳು
ಮತ್ತು
ಜಳ್ಳು
ಸುದ್ಧಿಗಳಿಂದ ಸಾಬೀತಾಯಿತು.
ಇರುವ
ಹೊಣೆಗಾರಿಕೆಯ ನಿರ್ವಹಣೆಯೇ ಸವಾಲಾಗಿರುವ ಆಡಳಿತಗಳಿಗೆ ಮೈಮೇಲೆ
ಬಿದ್ದಿರುವ ಹೆಚ್ಚುವರಿ ಹೊಣೆಗಾರಿಕೆ ಎಂದರೆ
ಈ
ಕಿಡಿಗೇಡಿ ಸುದ್ಧಿಗಳ ನಿಯಂತ್ರಣ. ಸಂಖ್ಯಾ
ದೃಷ್ಟಿಯಿಂದ ದೊಡ್ಡ
ಪ್ರಮಾಣದಲ್ಲಿಯೇ ಇದ್ದು,
ವೈರಸ್ಸಿನ ಹರಡುವಿಕೆಯಷ್ಟೇ ಅಥವಾ
ಅದಕ್ಕಿಂತಲೂ ಒಂದು
ಗುಂಜಿ
ಹೆಚ್ಚೇ
ವೇಗವಾಗಿ ಹರಡುತ್ತಿರುವ ಈ
ಸುದ್ಧಿಗಳ ನಿಯಂತ್ರಣ ಮಾಡುವುದು ವೈರಸ್ಸನ್ನು ಹರಡುವಿಕೆಯನ್ನು ನಿಯಂತ್ರಿಸುವುದಕ್ಕಿಂತಲೂ ದೊಡ್ಡ
ಸಮಸ್ಯೆಯಾಗಿಬಿಟ್ಟಿದೆ. ಒಂದು
ಕಡೆ
ವೈದ್ಯರು, ದಾದಿಯರು, ಪೌರಕಾರ್ಮಿಕರು ಸೇರಿದಂತೆ ಕೆಲವು
ಇಲಾಖೆಗಳ ಅಧಿಕಾರಿಗಳು, ನೌಕರರು
ಅವಿಶ್ರಾಂತರಾಗಿ ಕೆಲಸ
ನಿರ್ವಹಿಸುತ್ತಿದ್ದರೆ ಕೆಲವರು
ಮನೆಯಲ್ಲಿ ಕುಳಿತು
ಇಂತಹ
ಸುದ್ಧಿಗಳ ಹಂಚಿಕೆ
ಮಾಡುತ್ತಿದ್ದಾರೆ. ತೀವ್ರತರಹದ ಎಚ್ಚರಿಕೆಯ ಕ್ರಮಗಳಿಂದ ಕಳೆದ
ಐದಾರು
ದಿನಗಳಿಂದ ಇವುಗಳಿಗೆ ಕಡಿವಾಣ
ಬಿದ್ದದ್ದು ನಿಜವಾದರೂ ಅವುಗಳು
ಸಂಪೂರ್ಣ ನಿಂತಂತಿಲ್ಲ. ಕಳೆದ
ಹದಿನೈದು ದಿನಗಳ
ಅವಧಿಗಳಲ್ಲಿ ಭಾರತದಲ್ಲಿ ಹೀಗೆ
ಹಂಚಿಕೆಯಾದ, ಕನ್ನಡ,
ಇಂಗ್ಲಿಷ್ ಮತ್ತು
ಹಿಂದಿ
ಭಾಷೆಯಲ್ಲಿನ, ಇಂತಹ
ಸುದ್ಧಿಗಳನೇಕನ್ನು ವಿಶ್ಲೇಷಣೆಗೆ ಒಳಪಡಿಸುವುದು ಈ
ಲೇಖನದ
ಉದ್ದೇಶವಾಗಿದೆ.
ಹೀಗೆ
ದೊಡ್ಡ
ಪ್ರಮಾಣದ ಗೊಂದಲವನ್ನು ಸೃಷ್ಟಿಸಿದ ಈ
ಸಂದೇಶಗಳು ಭೌತಿಕ
ಸ್ವರೂಪದಲ್ಲಿ ಮುಖ್ಯವಾಗಿ ಮೂರು
ರೀತಿಯಲ್ಲಿದ್ದವು. ಅವೆಂದರೆ ಲಿಖಿತ
ರೂಪದ
ಸಂದೇಶಗಳು, ಆಡಿಯೋ
ಸಂದೇಶಗಳು ಮತ್ತು
ವಿಡಿಯೋ
ಸಂದೇಶಗಳು. ಈ
ಮೂರೂ
ರೀತಿಯ
ಸಂದೇಶಗಳನ್ನು ಅವುಗಳ
ರಚನಾ
ಸ್ವರೂಪದ ದೃಷ್ಟಿಯಿಂದ ಮೂರು
ವಿಧಗಳಲ್ಲಿ ವಿಂಗಡಿಸಬಹುದು. ಅವೆಂದರೆ ಮೊದಲನೆಯದು ಅನಾಥ
ಸಂದೇಶಗಳು ಎರಡನೆಯದು ಬೇನಾಮಿ
ಸಂದೇಶಗಳು ಮತ್ತು
ಕೊನೆಯದಾಗಿ ನಕಲಿ
ಸಂದೇಶಗಳು.
ಹೆಸರೇ ಇಲ್ಲದ ಅನಾಥ ಸಂದೇಶಗಳು:
ಈ
ಸಂದೇಶಗಳು ಒಂದು
ರೀತಿಯಲ್ಲಿ ಅಪ್ಪಅಮ್ಮ ಯಾರೂ
ದಿಕ್ಕಿಲ್ಲದ ಮಕ್ಕಳಿದ್ದಂತೆ. ಅಂದರೆ
ಇವನ್ನು
ರಚನೆ
ಮಾಡಿದವರು ಯಾರು
ಏನು
ಎಂದು
ಯಾವ
ವಿವರಗಳೂ ಇವುಗಳಲ್ಲಿ ಇರುವುದಿಲ್ಲ. ಹಾಗಾಗಿ
ಇವುಗಳ
ಬಗ್ಗೆ
ನಮಗೆ
ಏನಾದರೂ
ಸಂಶಯ
ಬಂದರೆ
ಇವುಗಳನ್ನು ರಚಿಸಿದವರನ್ನು ಕೇಳಿ
ಖಾತ್ರಿಪಡಿಸಿಕೊಳ್ಳುವ ಅವಕಾಶ
ಇಲ್ಲಿ
ಇರುವುದಿಲ್ಲ. ಇವು
ಸುಮ್ಮನೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಮತ್ತೆಲ್ಲಿಗೋ ಫುಟ್ಬಾಲ್ ಚೆಂಡಿನಂತೆ ಹಾರುತ್ತ ಬರುತ್ತವೆ. ಇಂತಹ
ಸಂದೇಶಗಳಿಗೆ ಉದಾಹರಣೆಯಾಗಿ ನನಗೆ
ಸುಮಾರು
ಒಂದು
ವಾರದ
ಹಿಂದೆ
ಬಂದ
ಎರಡು
ಸಂದೇಶಗಳನ್ನು ಇಲ್ಲಿ
ಚರ್ಚೆಗೆ ಎತ್ತಿಕೊಳ್ಳುತ್ತೇನೆ: ಒಂದು
“ಚೈನಾ
ಇಡೀ
ಪ್ರಪಂಚದಲ್ಲಿ ತಾನೇ
ಶಕ್ತಿಶಾಲಿ ರಾಷ್ಟ್ರವಾಗಬೇಕೆಂದು ಕೊರೊನಾ
ವೈರಸ್ಸನ್ನು ಪ್ರಪಂಚದ ವೈರಿ
ರಾಷ್ಟ್ರಗಳ ಮೇಲೆ
ಪ್ರಯೋಗಿಸಲು ಜೈವಿಕ
ಅಸ್ತ್ರವನ್ನಾಗಿ ಬಳಸಲು
ತಯಾರಿಸಿತ್ತು; ಆಯತಪ್ಪಿ ಅದು
ಅದಕ್ಕೇ
ಮುಳುವಾಯಿತು” ಎನ್ನುವ
ಅರ್ಥದ
ಸಂದೇಶ.
ಇನ್ನೊಂದು: “ಚೈನಾದೇಶವೇ ಈ
ಕಾಯಿಲೆ
ತಡೆಗಟ್ಟಲು ತನ್ನ
ದೇಶದಲ್ಲಿ `ಗೋಮೂತ್ರ’ ಮತ್ತು
`ಅರಿಶಿಣ
ನೀರು’
ಇವುಗಳನ್ನು ವಿಮಾನದಿಂದ ಸಿಂಪಡಿಸುತ್ತಿದೆ; ಅಲ್ಲಿ
ಮಾಡಿದರೆ ಅದು
ದೈವ
ನಂಬಿಕೆ
ನಮ್ಮಲ್ಲಿ ಮಾಡಿದರೆ ಮೂಢನಂಬಿಕೆ” ಎಂಬ
ವ್ಯಂಗಾರ್ಥದ ಸಂದೇಶ.
ಇವೆರಡೂ
ತಳಬುಡಗಳಿಲ್ಲದ ಸಂದೇಶಗಳು ಮಾತ್ರವಲ್ಲ ಕೊಳಕು
ಆಲೋಚನೆಯ ಸಂದೇಶಗಳೂ ಹೌದು
ಎಂಬುದನ್ನು ನಾವು
ಅರ್ಥಮಾಡಿಕೊಳ್ಳಬೇಕು. ಮೊದಲನೆಯದಾಗಿ ತಳಬುಡವಿಲ್ಲದ ಸಂದೇಶಗಳು ಏಕೆಂದರೆ ಇವುಗಳೆರಡಕ್ಕೂ ಸ್ಪಷ್ಟವಾದ ಯಾವುದೇ
ಆಧಾರಗಳಿಲ್ಲ. ಕುತೂಹಲಕ್ಕೆ ನಾನು
ವಿಶ್ವ
ಆರೋಗ್ಯ
ಸಂಸ್ಥೆಯ ಹಾಗೆಯೇ
ಚೀನಾ
ಸರ್ಕಾರದ ಈ
ಬಗೆಗಿನ
ಪ್ರಕಟಣೆಗಳನ್ನು ಪರಿಶೀಲಿಸಿ ನೋಡುವ
ಪ್ರಯತ್ನಮಾಡಿದಾಗ ಇವೆರಡಕ್ಕೂ ಯಾವ
ಆಧಾರವೂ
ಸಿಗಲಿಲ್ಲ. ಇನ್ನೂ
ತಮಾಸೆಯ
ಸಂಗತಿ
ಎಂದರೆ
ರೋಗ
ತಡೆಗೆ
ಚೀನಾ
ಯಾವ
ಕ್ರಮ
ಅನುಸರಿಸಿತು ಎಂಬ
ಸಂಗತಿ
ವಿಶ್ವ
ಆರೋಗ್ಯ
ಸಂಸ್ಥೆ
ಮತ್ತು
ಭಾರತ
ಸರ್ಕಾರಗಳಿಗೇ ಇನ್ನೂ
ಸರಿಯಾಗಿ ಗೊತ್ತಿಲ್ಲದ ಸಮಯದಲ್ಲಿಯೇ ಈ
ಸಂದೇಶ
ಕಳಿಸಿದವರಿಗೆ ಅದು
ಗೊತ್ತಾಗಿತ್ತು! ಇವರೇ
ನಮ್ಮ
ಸರ್ಕಾರಕ್ಕೂ ಗೊತ್ತಿಲ್ಲದಂತೆ ಅಲ್ಲಿ
ಗುಪ್ತಾಚಾರರನ್ನೇನಾದರೂ ನೇಮಿಸಿದ್ದರೋ ಏನೋ!!
ಎರಡನೆಯದಾಗಿ ಈ ಸಂದೇಶಗಳು ಕೊಳಕು ಏಕೆಂದರೆ ಮೊದಲನೆಯದು ನಮ್ಮ ಅಕ್ಕಪಕ್ಕದ ರಾಷ್ಟ್ರಗಳನ್ನು `ಶತ್ರುಗಳನ್ನಾಗಿ ಮಾಡಿಕೊಂಡು ತೊಳುಮಡಿಯುವ ಟಗರೋತ್ಸಾಹಕ್ಕೆ ಪ್ರೇರಣೆ ನೀಡುವ ಮೂಲಕ ದೇಶವಾಸಿಗಳಲ್ಲಿ `ದ್ವೇಷಭಾವನೆ’ಯನ್ನು ತುಂಬುವ ದುರುದ್ಧೇಶವನ್ನು ಹೊಂದಿದ್ದರೆ ಎರಡನೆಯದು ನಮ್ಮ ದೇಶದ ಸಂವಿಧಾನವು ಒತ್ತುಕೊಟ್ಟು ಹೇಳಿರುವ ಬಹುಮುಖ್ಯವಾದ `ದೇಶವಾಸಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಜವಾಬ್ದಾರಿಯುತ ಕಾರ್ಯ’ವನ್ನೇ ಸಂಪೂರ್ಣವಾಗಿ ಗೋಮೂತ್ರದಲ್ಲಿ ಮುಳುಗಿಸಿ ಉಸಿರುಕಟ್ಟಿಸಿ ಸಾಯಿಸುವಂಥ, ಅಜ್ಞಾನಪ್ರಣೀತವಾದಂಥ ಮತ್ತು ದೇಶವನ್ನು ಹಿಮ್ಮುಖ ಚಲನೆಗೆ ತಳ್ಳುವಂಥ ಪ್ರತಿಗಾಮಿ ಉದ್ದೇಶವನ್ನು ಹೊಂದಿರುವಂಥದ್ದು. ಇಂಥವನ್ನೆಲ್ಲ ನೋಡಿದರೆ ನಮ್ಮ ದೇಶವನ್ನು ಗೋವಿನ ಸಗಣಿ ಮತ್ತು ಮೂತ್ರಗಳಿಂದ ಮೇಲೆತ್ತಿಕೊಳ್ಳಲಿಕ್ಕೇ ನಮಗೆ ಇನ್ನೂ ಎಷ್ಟೋ ವರ್ಷಗಳು ಬೇಕಾಗಬಹುದೇನೋ ಅನ್ನಿಸುತ್ತದೆ.
ಯಾರದೋ ಹೆಸರಿನ ಬೇನಾಮಿ ಸಂದೇಶಗಳು:
ಇವು
ಯಾವುದಾದರೂ ಒಂದು
ಹೆಸರನ್ನು ಹೊತ್ತು
ಬರುವ
ಸಂದೇಶಗಳು. ಇದರಲ್ಲಿ ಎರಡು
ರೀತಿ
ಇರುತ್ತವೆ. ಒಂದು:
ಸಂದೇಶ
ಇದ್ದು
ವ್ಯಕ್ತಿ ಇಲ್ಲದಿರುವಂಥವು. ಇನ್ನೊಂದು ವ್ಯಕ್ತಿಯಿದ್ದು ಸಂದೇಶ
ನಕಲಿ
ಇರುವಂಥವು. ಮೊದಲನೆಯ ಪ್ರಕಾರದ ಸಂದೇಶಗಳಲ್ಲಿ ಸಾರ್ವಜನಿಕ ಮಹತ್ವದ
ಒಂದು
ಸಂದೇಶವಿದ್ದು ಅದರ
ಕೆಳಗೆ
ಯಾರದೋ
ಒಂದು
ಹೆಸರು
ಇರುತ್ತದೆ. ಅವರ
ಸಂಪರ್ಕಕ್ಕೆ ಅವರ
ದೂರವಾಣಿ ಇ-ಮೇಲ್ ಇತ್ಯಾದಿ ಏನೂ
ಇರುವುದಿಲ್ಲ. ಅನೇಕ
ಸಂದರ್ಭಗಳಲ್ಲಿ ವಾಸ್ತವವಾಗಿ ಆ
ವ್ಯಕ್ತಿ ಇರುವುದೇ ಇಲ್ಲ.
ಇಲ್ಲದೇ
ಇರುವ
ವ್ಯಕ್ತಿಯೊಬ್ಬನ ಹೆಸರು
ಇಲ್ಲಿರುತ್ತದೆ. ಉದಾಹರಣೆಗೆ ಒಂದು
ಸಂದೇಶದ
ಕೊನೆಯಲ್ಲಿ `ಭಾಸ್ಕರ್ ರಾವ್,
ವಕೀಲರು,
ಮುಂಬೈ’
ಈ
ರೀತಿ
ಇರುತ್ತದೆ. ಈ
ವ್ಯಕ್ತಿಯನ್ನು ನೀವು
ಹೇಗೆ
ಪತ್ತೆ
ಹಚ್ಚುವಿರಿ? ಆ
ವ್ಯಕ್ತಿ ಇದ್ದರೆ
ತಾನೆ
ಪತ್ತೆ
ಹಚ್ಚುವುದು? ಎರಡನೆಯ
ಪ್ರಕಾರದ ಸಂದೇಶಗಳಲ್ಲಿ ವ್ಯಕ್ತಿ ಅಧಿಕೃತವಾಗಿ ಇರುತ್ತಾರೆ ಆದರೆ
ಸಂದೇಶ
ಅವರು
ನೀಡಿದ್ದಾಗಿರುವುದಿಲ್ಲ. ಅವರ
ಹೆಸರು
ಬಳಸಿಕೊಂಡು ಇನ್ಯಾರೋ ನೀಡಿರುತ್ತಾರೆ. ಇಂಥವು
ಪ್ರಮುಖವಾಗಿ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಪ್ರಸಾರ
ಆಗುತ್ತವೆ. ಜನರನ್ನು ನಂಬಿಸುವಲ್ಲಿ ಇವು
ಮೊದಲನೆಯ ಸಂದೇಶಗಳಿಗಿಂತ ಹೆಚ್ಚು
ಪರಿಣಾಮಕಾರಿ ಆದವುಗಳಾಗಿರುತ್ತವೆ. ಹಾಗಾಗಿ
ಮೊಲನೆಯ
ರೀತಿಯ
ಸಂದೇಶಗಳನ್ನು ಹಂಚಿಕೆ
ಮಾಡಲು
ಹಿಂಜರಿಯುವವರು ಇವನ್ನು
ಮುಂತಳ್ಳಲು ಒಂದಿಷ್ಟು ಧೈರ್ಯಮಾಡುತ್ತಾರೆ. ಇಲ್ಲೊಂದು ತಮಾಸೆಯ
ಸಂಗತಿ
ಎಂದರೆ
ಮೊದಲು
ಹಂತದಲ್ಲಿ ಬಂದ
ಸಂದೇಶಗಳು ಸುಳ್ಳಾಗಿರುತ್ತವೆ. ಈ
ಸುಳ್ಳು
ಸಂದೇಶಗಳನ್ನು ನಿಯಂತ್ರಿಸಲು ಎರಡನೆಯ
ಹಂತದಲ್ಲಿ ಅಧಿಕಾರಿಗಳ ಹೆಸರಿನಲ್ಲಿ ಬರುವ
ಎಚ್ಚರಿಕೆಯ ಸಂದೇಶಗಳು ಕೂಡ
ಸುಳ್ಳಾಗಿರುವಂಥದ್ದು! ಅಂದರೆ
ಕಳ್ಳನಾಗಿ ಬಂದವನು
ಕಳ್ಳನೂ
ಅಲ್ಲ.
ಅವನನ್ನು ಹಿಡಿಯಲು ಪೋಲೀಸನಾಗಿ ಬಂದವನು
ಪೋಲೀಸನೂ ಅಲ್ಲ!
ಇದೊಂದು
ರೀತಿಯ
ಕಳ್ಳ
ಪೋಲೀಸ್
ಆಟ!!
ಇದಕ್ಕೆ
ಒಂದು
ಉದಾಹರಣೆ ನೋಡಿ.
ಇದು
ಭಾರತ
ಸರ್ಕಾರದ ಗೃಹಮಂತ್ರಾಲಯದ ಪ್ರಧಾನ
ಕಾರ್ಯದರ್ಶಿ ರವಿ
ನಾಯಕ್
ಎಂಬುವರ
ಹೆಸರಿನಲ್ಲಿ ಬಂದ
ಸಂದೇಶ.
ವಾಟ್ಸಪ್ ಗ್ರೂಫ್ಗಳ ಅಡ್ಮಿನ್ ಗಳು
ಮತ್ತು
ಸದಸ್ಯರುಗಳಿಗೆ ಎಚ್ಚರಿಕೆ ನೀಡಲಾದ
ಈ
ಸಂದೇಶದಲ್ಲಿ ಕೊರೊನಾ
ವೈರಸ್
ಕುರಿತು
ಸರ್ಕಾರದ ಏಜನ್ಸಿಗಳನ್ನು ಹೊರತು
ಯಾರೇ
ಮಾಹಿತಿಯನ್ನು ಪ್ರಕಟಿಸುವುದನ್ನು `ಶಿಕ್ಷಾರ್ಹ ಅಪರಾಧ’
ಎಂದು
ಹೆದರಿಸಿ ತಪ್ಪು
ಸಂದೇಶ
ಪ್ರಕಟಣೆಗೆ ಗುಂಪಿನ
ಆಡಳಿತಗಾರರ ವಿರುದ್ಧ ಕಾನೂನು
ಕ್ರಮ
ಜರುಗಿಸುವ ಎಚ್ಚರಿಕೆ ಇದೆ.
ಈ
ಸಂದೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅದರಲ್ಲಿ ಎರಡು
ಮೂರು
ತೊಡಕುಗಳು ನನಗೆ
ಗೋಚರಿಸಿದವು. ಒಂದನ್ನು ಮಾತ್ರ
ಇಲ್ಲಿ
ಪ್ರಸ್ತಾಪಿಸುವುದಾದರೆ, ನಮ್ಮಲ್ಲಿ ಸರ್ಕಾರಗಳಿಗೆ ಯಾವುದೇ
ವಿಷಯಯಕ್ಕೆ ಸಂಬಂಧಿಸಿದಂತೆ ಪ್ರಜೆಗಳು ಆಡಿದ
ಮಾತು
ಅಥವಾ
ಮಾಡಿದ
ಪ್ರಕಟಣೆ ತಪ್ಪು
ಅಥವಾ
ಸುಳ್ಳು
ಆಗಿದ್ದರೆ ನೆಲದ
ಕಾನೂನಿನನ್ವಯ ಶಿಕ್ಷಿಸುವ ಅಧಿಕಾರವಿರುತ್ತದೆಯೇ ಹೊರತು
“ಯಾವ
ಮಾಹಿತಿಯನ್ನೂ ಯಾರೂ
ಪ್ರಕಟಿಸಬಾರದು” ಎಂದು
ಹೇಳುವ
ಅಧಿಕಾರ
ಇರುವುದಿಲ್ಲ. ಏಕೆಂದರೆ ಇದು
ಸಂವಿಧಾನವು ಪ್ರಜೆಗಳಿಗೆ ನೀಡಿದ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
ತರಬಹುದಾದ ಪ್ರಕರಣವಾಗಬಹುದು. ಈ
ಬಗ್ಗೆ
ಸಂಶಯ
ಬಂದು,
ಈ
ಸಂದೇಶ
ನನ್ನ
ಹತ್ತಿರ
ಬಂದ
ತಕ್ಷಣ
ಕೇಂದ್ರ
ಸರ್ಕಾರದ ಗೃಹಮಂತ್ರಾಲಯದ ಅಧಿಕಾರಿಗಳ ಹೆಸರಿನ
ದೊಡ್ಡ
ಪಟ್ಟಿಯನ್ನು ಪರಿಶೀಲಿಸಿದಾಗ ಈ
ಸಂದೇಶದಲ್ಲಿದ್ದ ಅಧಿಕಾರಿಯ ಹೆಸರೇ
ನನಗೆ
ಎಲ್ಲಿಯೂ ಸಿಗಲಿಲ್ಲ. ಈ
ಬಗ್ಗೆ
ಸಂಬಂಧಪಟ್ಟ ಮಂತ್ರಾಲಯಕ್ಕೆ ಸ್ಪಷ್ಟೀಕರಣ ಕೇಳಿ
ಬರೆದ
ಪತ್ರಕ್ಕೆ ತಕ್ಷಣ
ಉತ್ತರವೂ ಬರಲಿಲ್ಲ. ಆದರೆ
ನಂತರ
ಇದು
ಗೃಹಮಂತ್ರಾಲಯದಿಂದ ಹೊರಟ
ಸುದ್ಧಿಯಲ್ಲವೆಂಬುದು ಖಚಿತವಾಯಿತು.
ಪ್ರಸಿದ್ಧ
ಸಂಸ್ಥೆಗಳ `ಅಧಿಕೃತ’ ನಕಲಿ ಸಂದೇಶಗಳು
ಇವು
ಮೇಲಿನ
ಎರಡೂ
ಪ್ರಕಾರದ ಸಂದೇಶಗಳಿಗಿಂತ ಹೆಚ್ಚು
ಪ್ರಮಾಣದಲ್ಲಿ ಮತ್ತು
ವೇಗವಾಗಿ ಸಂಚರಿಸುವ ಸಂದೇಶಗಳು. ಏಕೆಂದರೆ ಇವು
ಸಾಂವಿಧಾನಿಕ ಹುದ್ದೆಗಳಾದ ಪ್ರಧಾನಮಂತ್ರಿ, ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು ಇಂತಹ
ಗಣ್ಯವ್ಯಕ್ತಿಗಳ ಮತ್ತು
ದೊಡ್ಡ
ದೊಡ್ಡ
ಸಂಸ್ಥೆಗಳ ಕಛೇರಿಗಳ ಲೆಟರ್
ಹೆಡ್
ಗಳು
ಸಹಿಗಳು
ಇತ್ಯಾದಿಗಳನ್ನು ಒಳಗೊಂಡು ಆದೇಶ
ಸುತ್ತೋಲೆ ಮಾದರಿಯಲ್ಲಿ ಸೃಷ್ಟಿಸಲ್ಪಟ್ಟಿರುತ್ತವೆ! ಈ
ಕಾರಣಕ್ಕೆ ಇವುಗಳು
ಮೇಲಿನ
ಎರಡು
ರೀತಿಯ
ಸಂದೇಶಗಳಿಗಿಂತ ಹೆಚ್ಚು
ವಿಶ್ವಾಸಾರ್ಹತೆಯನ್ನು ಪಡೆಯುತ್ತವೆ. ಸತ್ಯದ
ತಲೆಯ
ಮೇಲೆ
ಹೊಡೆಯುವಂತೆ ಇವು
ಇರುತ್ತವೆ. ಇವನ್ನು
ನಕಲಿ
ಎಂದು
ಗುರುತಿಸುವುದು ಬಹಳ
ಕಷ್ಟ.
ಹೀಗಾಗಿ
ವಿದ್ಯಾವಂತರು, ಜವಾಬ್ದಾರಿಯುತ ವ್ಯಕ್ತಿಗಳನ್ನೂ ಇವು
ವಂಚಿಸಿ,
ಅವರನ್ನೂ ಒಂದು
ಕ್ಷಣ
ಮೂರ್ಖರನ್ನಾಗಿ ಮಾಡಿ,
ಅವರಿಂದಲೇ ಅನೇಕ
ಗುಂಪುಗಳಿಗೆ ಹಂಚಲ್ಪಡುತ್ತವೆ.
ಕೋರೋನ
ವೈರಸ್
ಹರಡುವಿಕೆಯ ಈ
ಸಂದರ್ಭದಲ್ಲಿ ಇಂತಹ
`ಅಧಿಕೃತ’
ಅನ್ನಿಸುವ ಅನಧಿಕೃತ ಆದೇಶ
ಸುತ್ತೋಲೆಗಳು `ಪ್ರಧಾನಮಂತ್ರಿಗಳ ಕಾರ್ಯಾಲಯ’ `ಇಂಡಿಯನ್ ಮೆಡಿಕಲ್ ಅಸೋಸಿಯೇಶನ್’ `ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
(ಸಿಬಿಎಸ್ಇ), ಇಂತಹ
ದೇಶದ
ಅತ್ಯುನ್ನತ ಸಂಸ್ಥೆಗಳಲ್ಲದೆ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು
ವಿದೇಶಿ
ಸಂಸ್ಥೆಗಳಾದ `ವಿಶ್ವ
ಆರೋಗ್ಯ
ಸಂಸ್ಥೆ’
ಯುನಿಸೆಫ್, ನಾಸಾ(ಅಮೇರಿಕ) ಮುಂತಾದವುಗಳ ಹೆಸರಿನಲ್ಲಿಯೂ ಸೃಷ್ಟಿಸಿ ಹಂಚಲ್ಪಟ್ಟವು. ಸ್ಥಳೀಯವಾಗಿ ಹೇಳುವುದಾದರೆ ಕರ್ನಾಟಕ ಸರ್ಕಾರದ ಉನ್ನತ
ಶಿಕ್ಷಣ
ಇಲಾಖೆಯೊಂದರ ಕರೋನಾ
ರಜಾಸಂಬಂಧಿ ಆದೇಶವೊಂದು ಹೀಗೇ
ಫೋರ್ಜರಿ ಆಗಿ
ದೊಡ್ಡಮಟ್ಟದಲ್ಲಿ ಹರಿದಾಡಿತು. ಕೊನೆಗೆ
ಅದು
`ಅನಧಿಕೃತ’ ಎಂದು
ಹೇಳುವು
ಆದೇಶ
ಪ್ರಕಟವಾಯಿತು. ಸುಳ್ಳುಆದೇಶವನ್ನು ಮೊದಲು
ಹಂಚಿದವರೇ ಈ
ನಿಜವಾದ
ಆದೇಶವನ್ನೂ ಹಂಚಿ
ಮಾಡಿದ
ಪಾಪವನ್ನು ತೊಳೆದುಕೊಂಡರು!
ಹೀಗೆ
ಇಂತಹ
ಸಂದೇಶಗಳನ್ನು ಅವುಗಳ
ಭೌತಿಕ
ಮತ್ತು
ರಾಚನಿಕ
ಸ್ವರೂಪದ ಮೇಲೆ
ಈ
ಮೇಲಿನಂತೆ ವಿಭಾಗಿಸಬಹುದಾದರೆ ಅವುಗಳ
ಹಿಂದಿನ
ಕಲ್ಪಿತ
ಉದ್ದೇಶಗಳ ಆಧಾರದ
ಮೇಲೆ
ಅಧ್ಯಯನ
ದೃಷ್ಟಿಯಿಂದ ಮೂರು
ವಿಧಗಳಾಗಿ ವಿಂಗಡಿಸಿಕೊಳ್ಳಲು ಸಾಧ್ಯವಿದೆ. ಅವೆಂದರೆ ಮೊದಲನೆಯದಾಗಿ, ಮೌಢ್ಯ
ಮತ್ತು
ಅಜ್ಞಾನವನ್ನು ಹರಡುವ
ಸಂದೇಶಗಳು ಎರಡನೆಯದಾಗಿ ಜನಾಂಗಿಯ ದ್ವೇಷವನ್ನು ಹರಡುವ
ಸಂದೇಶಗಳು ಮತ್ತು
ಹಣಕಾಸು
ವಂಚನೆ
ಮತ್ತಿತರ ಸಂದೇಶಗಳು. ಅವುಗಳನ್ನು ಒಂದೊಂದಾಗಿ ನೋಡಬಹುದು.
ಮೌಢ್ಯ ಮತ್ತು ಅಜ್ಞಾನವನ್ನು ಹರಡುವ ಸಂದೇಶಗಳು
ನಮ್ಮ
ದೇಶ
ವೈಜ್ಞಾನಿಕವಾಗಿ ಏನೆಲ್ಲ
ಸಾಧನೆಮಾಡಿದರೂ ಅದನ್ನು
ಅಜ್ಞಾನದಿಂದ ಮತ್ತು
ಮತಮೌಢ್ಯಗಳಿಂದ ಮೇಲೆತ್ತಿಕೊಳ್ಳುವುದು ಅಷ್ಟು
ಸುಲಭದ
ಮಾತಲ್ಲ.
ನಮ್ಮಲ್ಲಿ ಅನೇಕರು
ವಿಜ್ಞಾನದ ಎಲ್ಲ
ಕೊಡುಗೆಗಳನ್ನೂ ತಮ್ಮ
ಬದುಕಿನಲ್ಲಿ ಬಳಸಿಕೊಳ್ಳುತ್ತಲೇ ವಿಜ್ಞಾನವನ್ನು ಜರಿಯುವ
ಕಾರ್ಯದಲ್ಲಿ ನಿರತರಾಗಿರುತ್ತಾರೆ. ಇಂಥವರ
ಬಹುಮುಖ್ಯ ಲಕ್ಷಣ
ಎಂದರೆ
ಪ್ರಪಂಚ
ಈಗ
ಎದುರಿಸುತ್ತಿರುವ ಮತ್ತು
ಮುಂದೆ
ಎದುರಿಸಲಿರುವ ಎಲ್ಲಾ
ಸಮಸ್ಯೆಗಳನ್ನೂ ಸಾವಿರಾರು ವರ್ಷಗಳ
ಹಿಂದೆಯೇ ನಮ್ಮ
ಋಷಿಮುನಿಗಳು ತಮ್ಮ
ದಿವ್ಯದೃಷ್ಟಿಯಿಂದ ಕಂಡುಕೊಂಡಿದ್ದರು ಮತ್ತು
ಅವುಗಳಿಗೆ ತಕ್ಕ
ಪರಿಹಾರಗಳನ್ನು ಆಗಲೇ
ಕಂಡುಹಿಡಿದುಬಿಟ್ಟಿದ್ದರು ಎಂದು
ನಂಬುವುದು. ಮತ್ತು
ಅದಕ್ಕೆ
ಪೂರಕವಾಗಿ ಯಾವುದಾದರೂ ಶಾಸ್ತ್ರ ಪುರಾಣಗಳ ಶ್ಲೋಕಗಳನ್ನು ಹೆಕ್ಕಿ
ತೆಗೆದು
ಸಂದರ್ಭಾನುಸಾರ ಅವುಗಳ
ಆಧಾರದ
ಮೇಲೆ
ವಾದಿಸುವುದು. ಹಿಂದೆ
ನಮ್ಮಲ್ಲಿ ಒಂದು
ದೊಡ್ಡಮಟ್ಟದ ಒಂದು
ಜ್ಞಾನಪರಂಪರೆ ಇತ್ತು
ಎಂಬುದನ್ನು ನಾವು
ಒಪ್ಪಿಕೊಳ್ಳುವುದು ತಪ್ಪಲ್ಲ.ಅದರ
ಬಗ್ಗೆ
ಹೆಮ್ಮೆಪಡುವುದೂ ತಪ್ಪಲ್ಲ. ಆದರೆ
ಎಲ್ಲದಕ್ಕೂ ಅಲ್ಲಿಯೇ ಉತ್ತರವಿತ್ತು ಎಂದು
ಸಾಧಿಸಲು ಹೋಗುವುದು ಮಾತ್ರ
ಅವಿವೇಕದ ಹಠಮಾರಿತನವಾಗುತ್ತದೆ. ಹೀಗೆ
ಸಾಧಿಸಹೊರಡುವವರು ಸಮಾಜವನ್ನು ಹಿಮ್ಮುಖಚಲನೆಗೆ ತಳ್ಳಬಲ್ಲರಲ್ಲದೆ ಇನ್ನೇನನ್ನೂ ಮಾಡಲಾರರು. ಅವರು
ಈ
ಸಂದರ್ಭದಲ್ಲಿ ಸುಮ್ಮನಿರುತ್ತಾರೆಯೇ? ಖಂಡಿತಾ
ಇಲ್ಲ.
ಹೀಗೆ
ಎಲ್ಲದಕ್ಕೂ ನಮ್ಮ
ಪ್ರಾಚೀನರಲ್ಲಿಯೇ ಉತ್ತರವಿತ್ತು ಎಂದು
ಯಾವಾಗಲೂ ನೆಲಕೆದರುವಂಥ ಚಾಳಿ
ನಮ್ಮಲ್ಲಿ ವೈದಿಕರಲ್ಲಿ ಹೆಚ್ಚು.
ಆದರೆ
ಈ
ಚಾಳಿ
ಶರಣರ
ಪರಂಪರೆಯ ವಾರಸುದಾರರೆಂದು ಹೇಳಿಕೊಳ್ಳುವವರಲ್ಲಿಯೂ ಶುರುವಾಗಿರುವಂತೆ ತೋರುತ್ತದೆ. ಇಲ್ಲದೆ
ಹೋಗಿದ್ದರೆ ಇದುವರೆಗೂ ಯಾವ
ಸಂಶೋಧಕರ ಕೈಗೂ
ಸಿಗದ
`ಅಲ್ಲಮನ
ವಚನ’ವೊಂದು (?)ಈ ಸಂದರ್ಭದಲ್ಲಿ ಈ
ಶಿವಪುರಾಣ ಸಂದೇಶದಂತೆಯೇ ಹರಿದಾಡುತ್ತಿರಲಿಲ್ಲ. ಅಲ್ಲಮನ
ಈ
ಅಗೋಚರ
ವಚನವು
ವಚನ
ಸಾಹಿತ್ಯ ಕನ್ನಡನಾಡಿನಿಂದ ಆಚೆಗೆ
ಹೋಗುವಲ್ಲಿ ಬಹುದೊಡ್ಡ ಕೆಲಸವನ್ನು ಮಾಡಿದ
ಬಸವ
ಸಮಿತಿಯ
ಮುಖ್ಯಸ್ಥ, ಅರವಿಂದ
ಜತ್ತಿಯವರ ಟ್ವಿಟರ್ ಖಾತೆಯಲ್ಲಿಯೇ ಪ್ರಕಟವಾಯಿತು ಎನ್ನುವುದು ಬಹಳ
ವಿಶೇಷ.
ಈ
ಪ್ರಕರಣಗಳ ಹಾಗೆಯೇ
ಈ
ಲೇಖನದ
ಆರಂಭದಲ್ಲಿಯೇ ಬಂದ
ಗೋಮೂತ್ರ ಮತ್ತು
ಅರಿಶಿಣ
ನೀರಿನ
ಸಂದೇಶವನ್ನೂ ಈ
ಹಿನ್ನಲೆಯಲ್ಲಿ ನಾವು
ನೋಡಬಹುದು.
ಇವುಗಳ
ಜೊತೆಗೆ
ನಮ್ಮಲ್ಲಿ ಹಿಂದೆ
ಆಯುರ್ವೇದದ ಹೆಸರಿನಲ್ಲಿ, ಮನೆವೈದ್ಯದ ಹೆಸರಿನಲ್ಲಿ ಹರಿದಾಡಿದ ಸಂದೇಶಗಳು ಒಂದಲ್ಲ
ಎರಡಲ್ಲ.
ಒಂದು
ಸಂದೇಶದಲ್ಲಿ `ಬೆಳ್ಳುಳ್ಳಿ ನೀರು
ಕುಡಿದು
ಅದರಿಂದ
ಬಾಯಿಮುಕ್ಕಳಿಸಿದರೆ ಕೊರೊನಾ
ಬರಲ್ಲ’
ಅಂತ
ಇದ್ದರೆ
ಇನ್ನೊಂದರಲ್ಲಿ `ಚಹ
ಕುಡಿದರೆ ಕೊರೊನಾ
ಬರುವುದಿಲ್ಲ’ ಎಂದು
ಇರುತ್ತಿತ್ತು. ಮತ್ತೊಂದರಲ್ಲಿ ಸರಾಯಿಯನ್ನು ಕುಡಿದರೆ ಕೊರೋನಾ
ಬರುವುದಿಲ್ಲ ಎಂದು
ಇದ್ದರೆ
ಮುಗುದೊಂದರಲ್ಲಿ ಸೊಳ್ಳೆಕಚ್ಚುವಿಕೆಯಿಂದ ಕೊರೊನಾ
ಬರುತ್ತದೆ ಎಂದಿರುತ್ತಿತ್ತು. `ಕೋಳಿ
ತಿನ್ನುವುದರಿಂದ ಬರುತ್ತದೆ’ ಎಂಬ
ಸಂದೇಶದ
ಜೊತೆಗೆ
ವಿಶ್ವ
ಆರೋಗ್ಯ
ಸಂಸ್ಥೆಯ ಹೆಸರಿನಲ್ಲಿಯೇ `ಬೇಕರಿ
ಐಟಂ
ಐಸ್
ಕ್ರೀಮ್
ಅವೈಡ್
ಮಾಡಿ
ಅವುಗಳಿಂದ ಕೊರೊನಾ
ಬರುವ
ಸಂಭವ
ಹೆಚ್ಚು
ಎನ್ನುವ
ಸಂದೇಶವೂ ಬಂತು!
ಇಷ್ಟೇ
ಏಕೆ
ಕೊರೋನಗೆ ಭಾರತದಲ್ಲಿ 27 ವರ್ಷಗಳ
ಹಿಂದೆಯೇ ಔಷಧಿ
ಕಂಡುಹಿಡಿಯಾಗಿದೆ ಎಂಬ
ಸಂದೇಶವೂ ಬಂತು!
`ಕೂಸು
ಹುಟ್ಟುವ ಮೊದಲೆ
ಕುಲಾವಿ
ಹೊಲಿಸಿಟ್ಟರು’ ಅನ್ನುವ
ಹಾಗೆ!!
ತಾವು
ಈ
ಸಂದೇಶಗಳಲ್ಲಿನ ಅಂಶವನ್ನು ಸ್ವತಃ
ಅನುಸರಿಸದಿದ್ದರೂ ಜನ
ಇವನ್ನು
ಸುಮ್ಮನೆ ಕುರುಡಾಗಿ ತಮಗೆ
ಗೊತ್ತಿರುವ ಗುಂಪುಗಳಿಗೆ ತಳ್ಳುತ್ತಾ ಹೋದರು.
ಸಮಾಧಾನದ ಸಂಗತಿ
ಎಂದರೆ
‘ಸತತವಾಗಿ ಸೆಕ್ಸ್
ಮಾಡಿದರೆ ಕೊರೊನಾ
ಬರಲ್ಲ’
ಎಂದು
ನಟಿ
ಶ್ರೀರೆಡ್ಡಿ ಮಾಡಿದ
ಟ್ವೀಟ್
ಇವರ
ಕೈಗೆ
ಸಿಗದೇ
ಇದ್ದದ್ದು!!
ಈ
ವಿಭಾಗದಲ್ಲಿ ನಮೂದಿಸಬಹುದಾದಿ ಇನ್ನೊಂದು ಮುಖ್ಯವಾದ ಸಂದೇಶವೆಂದರೆ ಅದು
ಪ್ರಧಾನಮಂತ್ರಿಯವರು ದೇಶವಾಸಿಗಳಿಗೆ ಏ.5
ರಂದು
ರಾತ್ರಿ
ಒಂಬತ್ತು ಗಂಟೆಗೆ
ಒಂಬತ್ತು ನಿಮಿಷಗಳ ಕಾಲ
ಮನೆಗಳ
ವಿದ್ಯುದ್ದೀಪಗಳನ್ನು ಕೆಡಿಸಿ,ಕ್ಯಾಂಡಲ್, ಟಾರ್ಚ್, ಮೊಬೈಲ್ ಫ್ಲ್ಯಾಷ್ ಇತ್ಯಾದಿ ಹಚ್ಚಲು
ನೀಡಿದ
ಕರೆಯ
ಹಿನ್ನಲೆಯಲ್ಲಿ ಸೃಷ್ಟಿಯಾದ ಒಂದು
`ಅಜ್ಞಾನವಿಜ್ಞಾನ’ ಸಂದೇಶ.
ಇದನ್ನು
ನೆನಪಿಡಲು ನೀವು
`ಮೇಣದಬತ್ತಿ ಸಂದೇಶ’
ಎಂದೂ
ಬೇಕಾದರೆ ಕರೆದುಕೊಳ್ಳಬಹುದು. ಈ ಸಂದೇಶದದಲ್ಲಿ ಒಂದು ಮೇಣದಬತ್ತಿ, ಒಂದು
ಮೊಬೈಲ್
ಫ್ಲಾಷ್,
ಒಂದು
ದೀಪ
ಎಷ್ಟು
ಶಾಖ
ನೀಡುತ್ತವೆ. ದೇಶದಲ್ಲಿ ಒಟ್ಟು
ಇರುವ
ಜನರೆಷ್ಟು ಅವರಲ್ಲಿ ಎಷ್ಟುಜನ ಪ್ರಧಾನಿಗಳ ಮಾತನ್ನು ನಡೆಸಿದರೆ ಎಷ್ಟು
ಶಾಖ
ಬಿಡುಗಡೆಯಾಗುತ್ತದೆ ಎಂಬ
ಲೆಕ್ಕಾಚಾರ ಮಾಡಿ,
ಈ
ಕಾರ್ಯದಿಂದ ಉತ್ಪನ್ನವಾಗುವ ದೊಡ್ಡ
ಮಟ್ಟದ
ಶಾಖವೊಂದು ಹೇಗೆ ಕೊರೊನಾ
ವೈರಾಣು
ಇನ್ನಿಲ್ಲದಂತೆ ಮಾಡುತ್ತದೆ ಎಂದು
ಜನತಲೆತೂಗುವಂತೆ ಹೇಳಿ
ಅವರನ್ನು ಯಾಮಾರಿಸಲಾಗಿತ್ತು.
ಈ
ಸಂದೇಶದಲ್ಲಿ `ಕೊರೊನಾ
ವೈರಾಣು
ಯಾವ
ದಿನಾಂಕದಂದು ಸಾಯುತ್ತದೆ ಎಂದು
ಸ್ಪಷ್ಟವಾಗಿ ತಿಳಿಸಲಾಗಿತ್ತು. ಈ
ಸಂದೇಶ
ನನಗೆ
ಇಂಗ್ಲಿಷ್ ಮತ್ತು
ಕನ್ನಡ
ಎರಡರಲ್ಲಿಯೂ ಅನೇಕಕಡೆಗಳಿಂದ ಬಂದಿತ್ತು. ಇಂಗ್ಲಿಷ್ ಸಂದೇಶಗಳಲ್ಲಿ ವೈರಾಣುವಿನ ಮರಣ
ದಿನಾಂಕವನ್ನು ಏ.5
ಎಂದು
ನಿಗಧಿಪಡಿಸಿದ್ದರೆ ಕನ್ನಡ
ಸಂದೇಶಗಳಲ್ಲಿ ಅದನ್ನು
ಏ.7
ಎಂದು
ನಿಗಧಿಪಡಿಸಲಾಗಿತ್ತು. ಆದರೆ
ಈ
ಲೇಖನ
ಬರೆಯುವ
ವೇಳೆಗೆ
ಈ
ಎರಡೂ
ದಿನಾಂಕಗಳು ದಾಟಿಹೋಗಿವೆ ಮತ್ತು
ಈ
ವೈರಾಣು
ಇನ್ನೂ
ನಮ್ಮಲ್ಲಿ ಹಬ್ಬುತ್ತಲೇ ಇದೆ.
ಇದನ್ನು
`ಅಜ್ಞಾನವಿಜ್ಞಾನ’ ಸಂದೇಶ
ಎನ್ನಲಿಕ್ಕೆ ಇದಕ್ಕೆ
ಬೇರೆ
ಏನೂ
ಸಾಕ್ಷಿ
ಬೇಡವೇನೋ. ಕನ್ನಡ
ಇಂಗ್ಲಿಷ್ ಎರಡೂ
ಸಂದೇಶಗಳಲ್ಲಿ ಸಮಾನವಾಗಿದ್ದ ಒಂದು
ಅಂಶವೆಂದರೆ ಇದು
ನಮ್ಮ
ಪ್ರಧಾನಿಯವರ `ಮಾಸ್ಟರ್ ಸ್ಟ್ರೋಕ್’ ಎಂಬ
ಹೊಗಳುಮಾತು. ಪ್ರಧಾನಿಗಳನ್ನು ಹೊಗಳುವುದಕ್ಕೆ ವಿಜ್ಞಾನವನ್ನು ಅಜ್ಞಾನಮಾಡುವ ಅವಶ್ಯಕತೆ ಇರಲಾರದು. ಇಂತಹ
ಇನ್ನೂ
ಹಲವಾರು
ಸಂದೇಶಗಳು ಹರಿದಾಡಿದವಾದರೂ ಅವನ್ನೆಲ್ಲವನ್ನೂ ಚರ್ಚಿಸಲು ಇಲ್ಲಿ
ಆಗುತ್ತಿಲ್ಲವಾದ್ದರಿಂದ ಕೈಬಿಡಲಾಗಿದೆ.
ಜನಾಂಗೀಯ ದ್ವೇಷ ಹರಡುವ ಸಂದೇಶಗಳು
ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಕೂಡಿಬಾಳುವಿಕೆ ಎಂಬುದು
ಒಂದು
ರಾಷ್ಟ್ರೀಯ ಮೌಲ್ಯ.
ದೇಶದ
ಅಸ್ತಿತ್ವವೇ ಈ
ಕೂಡುಬಾಳುವಿಕೆಯ ಮೇಲೆ
ನಿಂತಿರುತ್ತದೆ. ಇದನ್ನು
ಹಾಳುಗೆಡವುವಂಥ ದುಷ್ಟಪ್ರಯತ್ನಗಳು ನಮ್ಮಲ್ಲಿ ಆಗಾಗ
ನಡೆಯುತ್ತಲೇ ಇರುತ್ತವೆ. ಅಂತಹ
ದುಷ್ಟಶಕ್ತಿಗಳಿಗೆ ಕೂಡ
ಈ
ಕೊರಾನಾ
ಸಂದರ್ಭ
ವರದಾನವಾಯಿತು. ಅವು
ಕೂಡ
ತಮ್ಮ
ಕಾರ್ಯವನ್ನು ಚುರುಕುಗೊಳಿಸಿದವು. ಒಂದು
ಜನಾಂಗದ
ಮೇಲೆ
ಇನ್ನೊಂದು ಜನಾಂಗಕ್ಕೆ ದ್ವೇಷಬರುವಂತೆ ಮಾಡುವ
ಸಂದೇಶಗಳನ್ನು ಅವು
ಬಿತ್ತರಿಸತೊಡಗಿದವು. ಇವುಗಳಲ್ಲಿ ಮುಖ್ಯವಾಗಿ ಮತ್ತು
ಮೊದಲ
ಆದ್ಯತೆಯಾಗಿ ವಿಶ್ಲೇಷಿಸಬೇಕಾದದ್ದು ಬಹಳ
ವೈರಲ್
ಆದ
ಎರಡು
ವಿಡಿಯೋ
ತುಣುಕುಗಳ ಸಂದೇಶಗಳನ್ನು. ಅವುಗಳಲ್ಲಿ ಮೊದಲನೆಯದು `ಕೊರೊನಾ
ವೈರಸ್
ಪೀಡಿತ
ಹಣ್ಣಿನ
ವ್ಯಾಪಾರಿಯೊಬ್ಬ ಇತರರಿಗೆ ಈ
ವೈರಸ್
ತಗಲಿಸಲೆಂದು ತಾನು
ಮಾರುವ
ಹಣ್ಣುಗಳಿಗೆ ತನ್ನ
ಎಂಜಲನ್ನು ಸವರಿ
ಸವರಿ
ಮಾರುತ್ತಿದ್ದಾನೆ’ ಎಂಬುದನ್ನು ತೋರಿಸುವ ಒಂದು
ವಿಡಿಯೋ
ತುಣುಕು. ಈ
ವಿಡಿಯೋ
ತುಣುಕು
ನೋಡಿ
ಜನ
ಎಷ್ಟು
ಮನಸ್ಸು
ಕೆಡಿಸಿಕೊಂಡರೆಂದರೆ ಆ
ಹಣ್ಣಿನ
ವ್ಯಾಪಾರಿ ಪ್ರತಿನಿಧಿಸುವ ಜನಾಂಗದ
ಯಾವ
ವ್ಯಾಪಾರಿಯ ಹತ್ತಿರವೂ ಹಣ್ಣು,
ತರಕಾರಿ
ಏನನ್ನೂ
ಖರೀದಿಸಬಾರದೆಂದು ಕೆಲವು
ಕೋಮುಪಿತ್ತದ ಹುಡುಗರು ತಮ್ಮ
ತಮ್ಮ
ಜನಾಂಗಗಳಿಗೆ ಸಂದೇಶ
ಕಳಿಸತೊಡಗಿದರು. ಕೆಲವು
ಊರುಗಳ
ದ್ವಾರಗಳಲ್ಲಿ `ಇಂತಹ
ಜನಾಂಗದ
ವ್ಯಾಪಾರಿಗಳಿಗೆ ಊರೊಳಗೆ
ಪ್ರವೇಶವಿಲ್ಲ’ ಎಂಬ
ಕಾನೂನು
ವಿರೋಧಿ
ಸೂಚನಾ
ಫಲಕಗಳು
ನೇತಾಡತೊಡಗಿದವು! ವಾಸ್ತವದಲ್ಲಿ ಈ
ವಿಡಿಯೋ
ಮಧ್ಯಪ್ರದೇಶದ್ದು, ಕಳೆದ
ಫೆಬ್ರವರಿಯಲ್ಲಿ ಚಿತ್ರೀಕರಣಗೊಂಡಿರುವಂಥದ್ದು, ಕೋಮುದ್ವೇಷ ಉದ್ರಿಕ್ತತೆಗೆ ಅದನ್ನು
ಬಳಸಿಕೊಳ್ಳಲಾಗಿತ್ತು. ಸತ್ಯಾಂಶ ಎಂದರೆ
ಆ
ಹಣ್ಣಿನ
ವ್ಯಾಪಾರಿಗೆ ಕೊರೊನ
ಸೋಂಕು
ತಗಲಿದ್ದಿಲ್ಲ ಎಂಬುದು.
ಇದೇ
ರೀತಿ
ನಿಜಾಮುದ್ಧೀನ್ ದರ್ಗಾದ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಕೊರೊನಾ
ಹರಡುವ
ಉದ್ದೇಶದಿಂದ ಊಟದ
ಪಾರ್ಸಲ್ಲಿನಲ್ಲಿ ಉಗುಳುವ
ದೃಶ್ಯವುಳ್ಳ ವಿಡಿಯೋ
ತುಣುಕೊಂದು ಎಲ್ಲೆಡೆ ಹರಿದಾಡಿತು. ಹಾಗೆಯೇ
ಒಂದಿಷ್ಟು ಜನ
ಸಾಮೂಹಿಕವಾಗಿ ಸೀನುವ
ದೃಶ್ಯದ
ವಿಡಿಯೋ
ಕೂಡ.
ಆದರೆ
ಊಟದಲ್ಲಿ ಉಗುಳುವ
ದೃಶ್ಯದ
ಈ
ವಿಡಿಯೋ
ಹಳೆಯ
ವಿಡಿಯೋ
ಆಗಿದ್ದು ಈ
ವೈರಾಣುವಿನ ಸುದ್ಧಿಯೇ ಇಲ್ಲದಾಗ ಅಂದರೆ
2019ರ
ಏಪ್ರಿಲ್ಲಲ್ಲಿಯೇ ಯೂಟ್ಯೂಬಲ್ಲಿ ಪ್ರಕಟಗೊಂಡಿತ್ತು ಎಂಬುದನ್ನು ಪತ್ತೆಹಚ್ಚಲಾಯಿತು. ಇನ್ನು
ಸೀನುವ
ದೃಶ್ಯವಿರುವ ವಿಡಿಯೋ
ನಮ್ಮಲ್ಲಿಯದಲ್ಲ; ಅದು
ಪಾಕಿಸ್ತಾನದ ಮೂಲದ್ದು ಮತ್ತು
ಅದು
ಸೀನುವಂಥದ್ದಲ್ಲ;. ಒಂದು
ಸೂಫಿ
ಆಚರಣೆ
ಎನ್ನುವುದೂ ದೃಢಪಟ್ಟಿತು. ಈ
ವಿಡಿಯೋಗಳಲ್ಲದೆ ಅನೇಕ
ಸಂದೇಶಗಳೂ ಇಂತಹ
ಉದ್ದೇಶಕ್ಕಾಗಿ ಹರಿಬಿಡಲ್ಪಟ್ಟವು. ಎಂದೋ
ಎಲ್ಲಿಯೋ ಚಿತ್ರೀಕರಣಗೊಂಡ ಹಳೆಯ
ವಿಡಿಯೋ
ತುಣುಕಗಳನ್ನು, ಸಂದೇಶಗಳನ್ನು ಈ
ಸಂದರ್ಭಕ್ಕೆ ಜೋಡಿಸಿ
ಜನರ
ಮನಸ್ಸಿನಲ್ಲಿ ದ್ವೇಷಭಾವನೆಯನ್ನು ಬಿತ್ತುವ ಇಂತಹವರು ನೀಚರಲ್ಲದೆ ಇನ್ನೇನಾಗಿರಲು ಸಾಧ್ಯ?
ಹಣಕಾಸು ದುರುಪಯೋಗ ಮತ್ತು ಇತರೆ ಸಂದೇಶಗಳು
ಈ
ವಿಭಾಗದಲ್ಲಿ ಮುಖ್ಯವಾಗಿ ಪ್ರಧಾನಮಂತ್ರಿಗಳು ಕೊರೊನಾ
ವಿರುದ್ಧದ ದೇಶದ
ಹೋರಾಟದಲ್ಲಿ ಅಗತ್ಯ
ಬೀಳುವ
ಖರ್ಚು
ನಿರ್ವಹಣೆಗಾಗಿ ದೇಶವಾಸಿಗಳಿಗೆ ಉದಾರ
ಸಹಾಯ
ಹಸ್ತ
ಚಾಚಲು
ಮನವಿ
ಮಾಡಿಕೊಂಡು ಅವರು
ಅದಕ್ಕಾಗಿ ಸ್ಥಾಪಿಸಿದ ಪಿ.ಎಂ. ಕೇರ್ಸ್ (PM CARES) ನಿಧಿಯ ಗುರುತು
ಸಂಖ್ಯೆಗಳನ್ನು ನಕಲಿಮಾಡಿ ಹಂಚಿ
ಆ
ಹಣ
ಅಲ್ಲಿಗೆ ಹೋಗದೆ
ಬೇರೆಕಡೆಗೆ ಹೋಗಲು
ಪ್ರಯತ್ನಿಸಿದ ಸಂದೇಶಗಳು ಸೇರುತ್ತವೆ. ದೇಶದ
ಬಡಬಗ್ಗರು ಅನ್ನಕ್ಕಾಗಿ ಆಹಾಕಾರವುಂಟಾಗಿ ಸಂಕಟದಿಂದ ನರಳುತ್ತಿರುವ ಸಂದರ್ಭದಲ್ಲಿಯೂ ಕೆಲವರದ್ದು ದುಡ್ಡುಮಾಡುವ ದಂಧೆ.
ಒಂದು
ಸಾರೆ
ದುಡ್ಡುಮಾಡುವ ದಂಧೆಗೆ
ಇಳಿದರೆ
ಅದಕ್ಕೆ
ಯಾವ
ಸಂಬಂಧ
ಸಂಕಟಗಳೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದಕ್ಕೆ ಇಂತಹ
ಪ್ರಕರಣಗಳು ಸಾಕ್ಷಿ.
ಉರಿಯುವ
ಮನೆಯಲ್ಲಿ ಗಳ
ಹಿರಿಯುವುದು ಅಂತಾರಲ್ಲ ಇದಕ್ಕೆ
ಇರಬಹುದು. ಇಲ್ಲಿನ
ಕೆಲವು
ಸಂದೇಶಗಳನ್ನು ಗಮನಿಸಿ.
ಪ್ರಧಾನಿಗಳ ನಿಧಿಗೆ
ಹೋಗಬೇಕಾದ ಹಣದ
ಕಾಲುವೆಯನ್ನು ದಿಕ್ಕುತಪ್ಪಿಸಲು ಇವರು
ಮಾಡಿದ
ವಂಚನೆ
ಮತ್ತು
ಆ
ವಂಚನೆಯನ್ನು ಭೇದಿಸಿ
ಅದನ್ನುಸರಿದಾರಿಗೆ ತರಲು
ಮಾಡಿದ
ಪ್ರಯತ್ನ ಎರಡೂ
ಅರಿವಿಗೆ ಬರುತ್ತವೆ.
ಈ
ವಿಭಾಗದಲ್ಲಿ ಗಮನಿಸಬಹುದಾದ ಮತ್ತಿತಯರ ಸುಳ್ಳುಸುದ್ಧಿಗಳೆಂದರೆ ಪ್ರಧಾನಿಯವರು ಘೋಷಣೆ
ಮಾಡಿದ
ಲಾಕ್ಡೌನ್ ಸುತ್ತಮುತ್ತ ಹಬ್ಬಿದ
ಸುಳ್ಳು
ಸುದ್ಧಿಗಳು, ಮತ್ತು
ಕೇಂದ್ರ
ಸರ್ಕಾರ
ಪ್ರಜೆಗಳ ಟಿಲಿಫೋನ್, ಮೆಸೇಜ್
ಇತ್ಯಾದಿಗಳ ಮೇಲ್ವಿಚಾರಣೆ ಮಾಡುತ್ತಿದೆ ಎಂಬ
ಸುದ್ಧಿಗಳು. ಲಾಕ್ಡೌನ್ ಸುದ್ಧಿಗಳಲ್ಲಿ ಮುಖ್ಯವಾಗಿ ಎರಡು
ರೀತಿಯ
ಸಂದೇಶಗಳಿದ್ದವು. ಒಂದು
ಅವರು
ಹೇಳಿದ್ದನ್ನು ತಿರುಚಿ
ತಪ್ಪು
ಅರ್ಥ
ಬರುವಂತೆ ಮಾಡಿದ
ಸಂದೇಶಗಳು. ಇನ್ನೊಂದು ಅವರು
ಹೇಳದೇ
ಇರುವುದನ್ನೂ ಹೇಳಿದ್ದಾರೆ ಎಂದು
ತಾವೇ
ಕೃತಕವಾಗಿ ಸೃಷ್ಟಿಸಿ ಹರಿಬಿಟ್ಟ ಸಂದೇಶಗಳು. ಇವು
ಲಾಕ್ಡೌನ್ ವಿಸ್ತರಣೆ, ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ,
ನೌಕರರ
ವೇತನ
ಕಡಿತಮಾಡುವುದು ಇತ್ಯಾದಿ ಸುದ್ಧಿಗಳನ್ನು ಒಳಗೊಂಡಿದ್ದವು. ವಾಸ್ತವದಲ್ಲಿ ಇವೆಲ್ಲವೂ ಸುಳ್ಳುಸುದ್ಧಿಗಳಾಗಿದ್ದವು. ಮುಖ್ಯವಾಗಿ ಜನರಲ್ಲಿ ಗೊಂದಲ
ಸೃಷ್ಟಿಸಿ ಆಡಳಿತದ
ಹಳಿತಪ್ಪಿಸುವುದು ಇಂತಹ
ಸಂದೇಶಗಳ ಗುರಿಯಾಗಿತ್ತು.
ಇನ್ನು
ಕೇಂದ್ರ
ಸರ್ಕಾರ
ದೇಶವಾಸಿಗಳ ಟಿಲಿಫೋನ್ ಎಸ್.ಎಂ.ಎಸ್. ವಾಟ್ಸ್ಪ್ ಮ್ಯಾಸೇಜ್ಗಳನ್ನು ಮೇಲುಸ್ತುವಾರಿ ಮಾಡುತ್ತಿದೆ ಎನ್ನುವುದನ್ನು ಸಾರಲು
ಮುಖ್ಯವಾಗಿ ಎರಡು
ಸಂದೇಶಗಳು ತೀವ್ರಗತಿಯಲ್ಲಿ ಹಂಚಿಕೆಯಾದವು. ಅವುಗಳಲ್ಲಿ ಒಂದು
ಕಾಲ್
ರಿಕಾರ್ಡಿಂಗ್, ಫೇಸ್ಬುಕ್ ಟ್ವಿಟರ್ ಖಾತೆಗಳ
ಮೇಲ್ವಿಚಾರಣೆ, ವಾಟ್ಸಪ್ ಸಂದೇಶಗಳ ಉಸ್ತುವಾರಿ ಏನೇನು
ಮಾಡಲಾಗುತ್ತದೆ ಎಂದು
ಹೇಳಿ
ಸೈಬರ್
ಪೋಲೀಸರಿಸಿ `ಹುಷಾರಾಗಿರಿ’ ಎಂದು
ಹೆದರಿಸಿತ್ತು. ಇನ್ನೊಂದು ವಿಶೇಷವಾಗಿ ವಾಟ್ಸಪ್ ಗುಂಪುಗಳಿಗಾಗಿಯೇ ರಚಿತವಾಗಿದ್ದು ಅದರಲ್ಲಿ ಟಿಕ್
ಮಾರ್ಕಿನ ವಿವರಣೆ
ಇತ್ತು.
ಅಂದರೆ
ಒಂದು
ಟಿಕ್
ಮಾರ್ಕ್
ಬಂದರೆ
ಏನರ್ಥ,
ಎರಡು
ಟಿಕ್
ಮಾರ್ಕ್
ಬಂದರೆ
ಏನರ್ಥ
ಮೂರು
ಬಂದರೆ
ಏನರ್ಥ
ಇತ್ಯಾದಿಗಳನ್ನು ವಿವರಿಸಲಾಗಿತ್ತು. ಯಾವ
ಮಾರ್ಕ್
ಬಂದರೆ
ನಿಮ್ಮ
ಸಂದೇಶವನ್ನು ಸರ್ಕಾರ
ನೋಡಿದೆ
ಎಂದು
ಅರ್ಥಮಾಡಿಕೊಳ್ಳಬೇಕು ಎಂದು
ವಿವರಿಸಲಾಗಿತ್ತು. ಇಂತಹುಗಳ ಮುಖ್ಯ
ಉದ್ದೇಶ
ಜನರಲ್ಲಿ ಅನಗತ್ಯ
ಭಯ,
ಆತಂಕ,
ಖಾಸಗೀತನದ ನಷ್ಟದ
ಅಸುರಕ್ಷತಾ ಭಾವ
ಉಂಟಾಗುವಂತೆ ಮಾಡುವುದೇ ಆಗಿರುತ್ತದೆ. ಇವು
ಕೂಡ
ಬಹಳ
ದೊಡ್ಡ
ಮಟ್ಟದಲ್ಲಿ ವೈರಲ್
ಆದವು.
ವಾಸ್ತವವಾಗಿ ಸರ್ಕಾರ
ತಾನು
ಆ
ಕೆಲಸವನ್ನು ಮಾಡುತ್ತಿಲ್ಲ ಎಂದು
ಸ್ಪಷ್ಟಪಡಿಸುವುದರೊಂದಿಗೆ ಇವು
ಸುಳ್ಳು
ಸುದ್ಧಿಗಳು ಎಂಬುದು
ಖಚಿತವಾಯಿತು.
ದುರ್ಜನರೊಡಗೂಡಿದ ಸಜ್ಜನರ ತಳ್ಳುಸೇವೆ
ಹೀಗೆ
ಸಂಖ್ಯಾದೃಷ್ಟಿಯಿಂದ ದೊಡ್ಡದಾದ ಮತ್ತು
ಪರಿಣಾಮಕಾರಿ ದೃಷ್ಟಿಯಿಂದ ಅಪಾಯಕಾರಿಯಾದ ಈ
ರೀತಿಯ
ಅಶುದ್ಧ
ಸುದ್ಧಿಗಳನ್ನು ಹಂಚುವ
ಕಾರ್ಯ
ಯಾವ
ಮಾಧ್ಯಮದಲ್ಲಿ ಹೆಚ್ಚಾಗಿ ನಡೆಯಿತು ಮತ್ತು
ಅದರಲ್ಲಿ ಯಾರೆಲ್ಲ ಇದ್ದರು
ಎಂಬುದನ್ನು ನೋಡೋಣ.
ಇಂತಹ
ಸುದ್ಧಿಗಳು ಮುದ್ರಣ
ಮಾಧ್ಯಮದಲ್ಲಿ ಪ್ರಸಾರವಾಗುವುದು ಬಹಳ
ಕಡಿಮೆ.
ಇವುಗಳಿಗೆ ದೃಶ್ಯಮಾಧ್ಯಮಗಳಲ್ಲೂ ತಕ್ಕಮಟ್ಟಿನ ನಿಯಂತ್ರಣ ಇರುತ್ತದೆ ಎಂದು
ನಾವು
ನಿರೀಕ್ಷಿಸಬಹುದು. (`ಕೇಂದ್ರ
ಗೃಹಮಂತ್ರಿಗಳಿಗೆ ಕೊರೊನಾ’
ಎಂಬ
ಸುದ್ಧಿಯೊಂದು ಟಿ.ವಿ ವಾಹಿನಿಯೊಂದರಲ್ಲಿ ಬ್ರೇಕಿಂಗ್ ನ್ಯೂಸ್
ಆಗಿ
ಪ್ರಸಾರವಾಯಿತಾದರೂ.) ಆದರೆ
ಇತ್ತೀಚಿನ ದಿನಮಾನಗಳಲ್ಲಿ ವ್ಯಾಪಕವಾಗಿ ಬಳಕೆಗೆ
ಬಂದಿರುವ ಸಾಮಾಜಿಕ ಮಾಧ್ಯಮದಲ್ಲಿ ಇವುಗಳಿಗೆ ಇಂಥದ್ದೊಂದು ನಿರ್ಬಂಧವನ್ನು ನಿರೀಕ್ಷಿಸಲಾಗುವುದಿಲ್ಲ. ಈ
ಸುದ್ಧಿಗಳು ವ್ಯಾಪಕವಾಗಿ ಹರಡಿದ್ದೇ ಈ
ಸಾಮಾಜಿಕ ಮಾಧ್ಯಮದಲ್ಲಿ. ನಮ್ಮಲ್ಲಿ ಸಾಮಾನ್ಯವಾಗಿ ಅತಿ
ಹೆಚ್ಚು
ಪ್ರಸಾರ
ಇರುವಂಥ
ಮೂರು
ಸಾಮಾಜಿಕ ಮಾಧ್ಯಮಗಳೆಂದರೆ ಟ್ವಿಟರ್, ಫೇಸ್ಬುಕ್ ಮತ್ತು
ವಾಟ್ಸಪ್. ಇದರಲ್ಲಿ ಟ್ವಿಟರ್ ಖಾತೆಯನ್ನು ಹೆಚ್ಚು
ಬಳಸುವವರು ಸಾಮಾಜಿಕ, ಆರ್ಥಿಕ,
ರಾಜಕೀಯ
ಮುಂತಾದ
ಕ್ಷೇತ್ರಗಳ `ಮೇಲ್ಮಟ್ಟ’ದ
ಜನವರ್ಗ.
ಪ್ರಧಾನಿ, ರಾಷ್ಟ್ರಪತಿ, ಚಲನಚಿತ್ರ ತಾರೆಯರು ವಿಜ್ಞಾನಿಗಳು ಹೀಗೆ.
ಮಧ್ಯಮ
ವರ್ಗವೂ
ಸೇರಿದಂತೆ ಜನಸಾಮಾನ್ಯರು ಈ
ಮಾಧ್ಯಮವನ್ನು ಬಳಸುವುದು ಬಹಳ
ಕಡಿಮೆ.
ಈ
ಮಾಧ್ಯಮವನ್ನು ಬಳಸುವವರು ಈ
ರೀತಿಯ
ಸುದ್ಧಿ
ಹಂಚಿಕೆಯ ವಿಷಯದಲ್ಲಿ ಬಹಳ
ಜನ
ಜವಾಬ್ದಾರಿಯುತ ಆಗಿರುವುದರಿಂದಲೋ ಅಥವಾ
ನಿರಾಸಕ್ತರಾಗಿರುವುದರಿಂದಲೋ ಅಲ್ಲಿ
ಈ
ಕೆಡುಕಿನ ಸುದ್ಧಿಗಳು ಹರಡಿದ್ದು ಇಲ್ಲ
ಎನ್ನುವಷ್ಟು ಕಡಿಮೆ.
ಇವುಗಳು
ವ್ಯಾಪಕವಾಗಿ ಹರಡಿದ್ದು ಫೇಸ್ಬುಕ್ ಮತ್ತು
ವಾಟ್ಸಪ್ಗಳಲ್ಲಿ. ಅದರಲ್ಲಿಯೂ ವಾಟ್ಸಪ್ ಅಂತೂ
ಫೇಸ್ಬುಕ್ ಬಳಸದವರೂ ಅಂದರೆ
ಸ್ಮಾರ್ಟ್ ಫೋನ್
ಇದ್ದವರೆಲ್ಲರೂ ಬಳಸುವಂಥದ್ದು. ಈ
ಸುದ್ಧಿ
ಹರಡುವಿಕೆಯಲ್ಲಿ ಬಹುಪಾಲು ಇದೇ
ಮುಂಚೂಣಿಯಲ್ಲಿತ್ತು ಎಂಬುದನ್ನು ನಾವು
ಗಮನಿಸಬೇಕು.
ಹಾಗೆ ನೋಡಿದರೆ ಈ ಸಮಯದಲ್ಲಿ ಇಂತಹ ಕೆಡುಕಿನ ಸುದ್ಧಿಗಳು ಮಾತ್ರ ಇರಲಿಲ್ಲ. ಇವುಗಳ ಜೊತೆಗೆ ನಮಗೆ ಆತ್ಮಸ್ಥೈರ್ಯ ತುಂಬುವ, ಧೈರ್ಯವನ್ನು ಹೇಳುವ, ಜಾತಿ ಜನಾಂಗಗಳ ಬೇಧಗಳನ್ನು ಮರೆತು ಒಂದಾಗುವ ಮಾನವೀಯ ಗುಣಗಳನ್ನು ಮರೆಯುವ ಮೂಲಕ ಆದರ್ಶವಾಗುವ ಕೆಲವು ಸುದ್ಧಿಗಳು ಅಲ್ಲಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದವು. ಒಂದು ಕೆಟ್ಟಸುದ್ಧಿಯನ್ನು ತಕ್ಷಣ ಪತ್ತೆಹಚ್ಚಿ ಅದನ್ನು ವೈರಲ್ ಮಾಡುವ ಕಿಡಿಗೇಡಿ ಮನಸ್ಸುಗಳಿಗೆ ಇಂತಹ ಒಳ್ಳೆಯ ಸುದ್ಧಿಗಳು ರುಚಿಸುವುದಾದರೂ ಹೇಗೆ? ಅದನ್ನು ಹಂಚಿಕೊಳ್ಳಬೇಕೆಂಬ ಮನಸ್ಸು ಬರುವುದಾದರೂ ಹೇಗೆ?
ಹಾನಿ ಮತ್ತು ಅನಾಹುತಗಳಿಗೆ ಯಾರು
ಹೊಣೆ?
ಕಳೆದ
ಹದಿನೈದು ಇಪ್ಪತ್ತು ದಿನಗಳಲ್ಲಿ ಇಲ್ಲಿ
ವೈರಲ್
ಆದ
ಈ
ಕಿಡಿಗೇಡಿ ಸುದ್ಧಿಗಳು ಮಾಡಿರುವ ಹಾನಿ
ಮತ್ತು
ಅನಾಹುತಗಳನ್ನು ನಾವು
ಸುಲಭವಾಗಿ ಲೆಕ್ಕಹಾಕಲು ಸಾಧ್ಯವೇ? ಇವೆಲ್ಲ
ತಪ್ಪು
ಅಥವಾ
ಸುಳ್ಳು
ಸುದ್ಧಿಗಳು ಎಂದು
ಗೊತ್ತಾಗಿ ವ್ಯವಸ್ಥೆ ಅವುಗಳ
ನಿಯಂತ್ರಣಕ್ಕೆ ಮುಂದಾಗುವ ವೇಳೆಗಾಗಲೇ ಅವು
ಲಕ್ಷಾಂತರ ಜನರನ್ನು ತಲುಪಿ
ಮಾಡಬಾರದ ಹಾನಿಯನ್ನು ಮಾಡಿಬಿಟ್ಟಿರುತ್ತಿದ್ದವು. ಅವು ಮಾಡಿರುವ ಹಾನಿ ಕೇವಲ ಭೌತಿಕ, ಆರ್ಥಿಕ, ಸಾಮಾಜಿಕ ಹೀಗೆ ಹಲವು ನೆಲೆಗಳಲ್ಲಿ ವಿಸ್ತರಿಸಲ್ಪಟ್ಟಿತು. ಇವು
ಮಾಡಿದ
ಹಾನಿಗಳಲ್ಲಿ ಬಹುದೊಡ್ಡ ಹಾನಿ
ಎಂದರೆ
ಭಾರತದ
ಕೂಡಿಬಾಳುವಿಕೆಗೆ ಕೊಡಲಿಪೆಟ್ಟು ಕೊಟ್ಟದ್ದು. ಅಪರಿಚಿತರನ್ನು ಸದಾ
ಸಂಶಯದಿಂದ ನೋಡುವಂತೆ ಮಾಡಿದ್ದು. ಹಿಂದೆ
ನಮ್ಮಲ್ಲಿ ನಗರಗಳಲ್ಲಿ ಮಾತ್ರ ಇದ್ದ ಕಾಯಿಲೆ ಇಂದು ನಗರಗಳ ಜೊತೆಗೆ ಹಳ್ಳಿಗಳಿಗೂ ಹಬ್ಬುವಂತೆ ಮಾಡಿದ್ದು. ಅಪರಿಚಿತರನ್ನು ಅತಿಥಿಗಳೆಂದು ಸ್ವಾಗತಿಸಿ, ಸತ್ಕರಿಸುವ ನಮ್ಮ ಭವ್ಯ ಪರಂಪರೆಯೊಂದಕ್ಕೆ ತಿಲಾಂಜಲಿಯನ್ನಿತ್ತದ್ದು. ಆ ಮೂಲಕ ಜನರ ಮನಸುಗಳೆಲ್ಲವೂ ಎಂದೆಂದಿಗೂ ತಿರಸ್ಕಾರ, ಅಸೂಯೆ, ಹೊಟ್ಟೆಕಿಚ್ಚು ಮುಂತಾದ ನಕಾರಾತ್ಮಕ ಭಾವನೆಗಳ ಕೊಳಕುಹೊಂಡಗಳಾಗುವಂತೆ ಮಾಡಿದ್ದು! ಹೌದು, ನಾವು ಹಿಂದಿನ ಕಾಲದಂತೆ ಎಲ್ಲರನ್ನೂ ಯಾವಾಗಲೂ ನಂಬಲು ಆಗದಿರಬಹುದು. ಆ ಹಿನ್ನಲೆಯಲ್ಲಿ ಜಾಗೃತಿ ಎನ್ನುವುದು ಕಾಲದ ಅಗತ್ಯವೂ ಆಗಿರಬಹುದು. ಆದರೆ ಅದರ ಜೊತೆಗೆ ನಾವು ಇನ್ನೊಂದು ಮುಖ್ಯವಾದ ಸಂಗತಿಯನ್ನೂ ಗಮನಿಸಬೇಕು. ಜಾಗೃತಿ ಹೆಸರಿನಲ್ಲಿ ಸದಾ ನಮ್ಮೊಳಗೆ ಅಪರಿಚರನ್ನು ಕುರಿತು ನಕಾರಾತ್ಮಕ ಭಾವನೆಗಳು ಬೆಳೆಯತೊಡಗಿದರೆ ಅದು ಅಜಾಗರೂಕರಾಗಿರುವುದಕ್ಕಿಂತ ಹೆಚ್ಚು ಅಪಾಯಕರ! ಏಕೆಂದರೆ ನಾವು ಅಜಾಗರೂಕರಾದರೆ, ಎಚ್ಚರ ತಪ್ಪಿದರೆ ಎಂದೋ ಒಂದು ಸಲ ತೊಂದರೆಗೆ ಸಿಕ್ಕಿಹಾಕಿಕೊಂಡು ನರಳಬೇಕಾಗಬಹುದು ಆದರೆ ಈ ನಕಾರಾತ್ಮಕ ಭಾವನೆಗಳು ಬೆಳೆದುಬಿಟ್ಟರೆ ಎಲ್ಲ ಅಪರಿಚಿತರೂ ಅಪಾಯಕಾರಿಗಳಾಗಿ ಕಾಣತೊಡಗಿ ನಾವು ನಿತ್ಯನರಳಬೇಕಾಗುತ್ತದೆ!!
ಈ
ವಿದ್ಯಮಾನ ಈಗ
ಮಾಡಿರುವ ಹಾನಿ
ದೊಡ್ಡದೇ ಆದರೂ
ಮುಂದೆ
ಮಾಡಬಹುದಾದ ಹಾನಿ
ಇದಕ್ಕಿಂತ ದೊಡ್ಡದು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಸರ್ಕಾರ
ತೆಗೆದುಕೊಳ್ಳುವ ನಿಯಂತ್ರಣ ಕ್ರಮಗಳಿಂದಲೇ ಇಂತಹ
ಸುದ್ಧಿಗಳ ಹರಡುವಿಕೆ ತಡೆಯುವುದು ಕಷ್ಟ.
ಈ
ಲೇಖನದ
ಆರಂಭದಲ್ಲಿಯೇ ಉಲ್ಲೇಖಿಸಿದ ಅಲ್ಲಮನ
ವಚನದಲ್ಲಿ ಹೇಳಿದಂತೆ `ಹುಸಿಯನ್ನು ಬಿತ್ತಿಬೆಳೆಯುವ, ಕೊಯ್ದುಪೂಜಿಸುವ, ಅದರಿಂದ
ತಾವೂ
ಗಸಣಿಗೊಳಗಾಗಿ ಇತರರನ್ನೂ ಗಸಣಿಗೊಳಪಡಿಸುವ ದುಷ್ಟಕಾರ್ಯವನ್ನು ಎಲ್ಲರೂ
ಬಿಡಬೇಕು. ವಿಶೇಷವಾಗಿ ನಮ್ಮ
`ವಿದ್ಯಾವಂತ’ ಜನ!
*****
ಡಾ. ರಾಜೇಂದ್ರ
ಬುರಡಿಕಟ್ಟಿ
buradikatti@gmail.com
Monday, April 20, 2020