ಲಿಂಗಾಯತ ಮುಖಂಡ ಎಸ್ ನಿಜಲಿಂಗಪ್ಪನವರು ಡಾ.ಅಂಬೇಡ್ಕರ್ ಅವರನ್ನು ಭೇಟಿಯಾಗಿ ಮತಾಂತರವಾಗುವದೇ ಖಚಿತವಾದರೆ ಲಿಂಗಾಯತ ಧರ್ಮ ಸ್ವೀಕರಿಸುವಂತೆ ಮನವಿ ಮಾಡಿಕೊಂಡಾಗ , ಮಿ. ನಿಜಲಿಂಗಪ್ಪನವರೇ , ನಾನು ಬಸವಣ್ಣನವರ ಮತ್ತು ಲಿಂಗಾಯತ ಧರ್ಮದ ಬಗೆಗಿನ ವಿಷಯದಲ್ಲಿ ಅಧ್ಯಯನ ಮಾಡಿದಂತೆ ಲಿಂಗಾಯತ ಧರ್ಮ ಜಗತ್ತಿನ ಅತ್ಯಂತ ಸರ್ವ ಶ್ರೇಷ್ಠ ಧರ್ಮವಾಗಿದೆ. ಆದರೆ ಲಿಂಗಾಯತರೆಂದು ಹೇಳಿಕೊಳ್ಳುವವರು ಧರ್ಮವನ್ನು ಧರ್ಮವನ್ನಾಗಿ ಬೆಳೆಯಲು ಬಿಡದೆ ಜಾತಿಯನ್ನಾಗಿ ಪರಿವರ್ತಿಸಿ ತಮ್ಮ ಜೇಬುಗಳಲ್ಲಿ ಬಂಧಿಸಿಡುವ ಮೂಲಕ ಲಿಂಗಾಯತರೂ ಸಹ ಹಿಂದೂ ಧರ್ಮೀಯರೂ ನಾಚುವಂತೆ ಅಸ್ಪೃಶ್ಯತೆ ಆಚರಿಸುವಲ್ಲಿ ಹಾಗೂ ಜಾತಿ ತಾರತಮ್ಯ ಮಾಡುವಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದಾರೆ.
ಒಂದು ವೇಳೆ ನನ್ನ ಜನಾಂಗ ಲಿಂಗಾಯತ ಧರ್ಮ ಸ್ವೀಕರಿಸಿದ್ದೇ ಆದಲ್ಲಿ ಅವರ ಬದುಕಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಬರಲು ಸಾಧ್ಯವಿಲ್ಲ.
ಇನ್ನಾದರೂ ಜಾತಿಯ ಸಂಕೋಲೆಯಿಂದ ಹೊರಬಂದು ಬಸವಣ್ಣನವರ ಕನಸಿನ ಅನುಭವ ಮಂಟಪ ಮತ್ತೊಮ್ಮೆ ಕಟ್ಟುವ ನಿಟ್ಟಿನಲ್ಲಿ ಧರ್ಮ ಧರ್ಮವನ್ನಾಗಿ ಬೆಳೆಯಲು ಬಿಡಿ ಎಂದು ಡಾ.ಅಂಬೇಡ್ಕರ್ ರವರು ಹೇಳಿದ್ದರಂತೆ.
ಒಂದು ವೇಳೆ ನನ್ನ ಜನಾಂಗ ಲಿಂಗಾಯತ ಧರ್ಮ ಸ್ವೀಕರಿಸಿದ್ದೇ ಆದಲ್ಲಿ ಅವರ ಬದುಕಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಬರಲು ಸಾಧ್ಯವಿಲ್ಲ.
ಇನ್ನಾದರೂ ಜಾತಿಯ ಸಂಕೋಲೆಯಿಂದ ಹೊರಬಂದು ಬಸವಣ್ಣನವರ ಕನಸಿನ ಅನುಭವ ಮಂಟಪ ಮತ್ತೊಮ್ಮೆ ಕಟ್ಟುವ ನಿಟ್ಟಿನಲ್ಲಿ ಧರ್ಮ ಧರ್ಮವನ್ನಾಗಿ ಬೆಳೆಯಲು ಬಿಡಿ ಎಂದು ಡಾ.ಅಂಬೇಡ್ಕರ್ ರವರು ಹೇಳಿದ್ದರಂತೆ.
No comments:
Post a Comment