Thursday, November 16, 2017

ಟಿಪ್ಪು ಬಗ್ಗೆ ಮಹಾತ್ಮಾಗಾಂಧಿ ಅಭಿಪ್ರಾಯವೇನು ?

 ಟಿಪ್ಪು ಬಗ್ಗೆ ಮಹಾತ್ಮಾಗಾಂಧಿ ಅಭಿಪ್ರಾಯವೇನು ?
“ಪಾಶ್ಚಾತ್ಯ ಇತಿಹಾಸಕಾರರ ಅಭಿಪ್ರಾಯದಲ್ಲಿ ಮೈಸೂರಿನ ಅರಸ ಫತ್ತೆ ಆಲಿ ಟಿಪ್ಪು ಒಬ್ಬ ಮೂಢ, ಮೂರ್ಖ ಮುಸ್ಲಿಂ. ಅವನು ತನ್ನ ಪ್ರಜೆಗಳಾದ ಹಿಂದುಗಳನ್ನು ಹಿಡಿದು ಬಲವಂತವಾಗಿ ಇಸ್ಲಾಂ ಮತಕ್ಕೆ ಸೇರಿಸಿದ. ಆದರೆ ಇದೊಂದು ದೊಡ್ಡ ಸುಳ್ಳಿನ ಕಂತೆ. ಆಗ ಹಿಂದು-ಮುಸ್ಲಿಂಗಳ ಬಾಂಧವ್ಯ ಸ್ನೇಹಮಯವಾಗಿತ್ತು; ಇದು ಸತ್ಯಾಂಶ. ಟೀಪುವಿನ ಜೀವನ ಕಾಲದಲ್ಲಿ ಅವನು ಸಾಧಿಸಿದ ಕೆಲಸವೇ ಸಾಕು – ಅದೊಂದು ಆನಂದದ ಮೂಲ; ಅದೊಂದು ಸ್ಪೂರ್ತಿಯ ಮೂಲ. ಆ ಕಾಲದಲ್ಲಿ ಹಿಂದೂಗಳೂ ಮುಸ್ಲಿಮರೂ ಇಬ್ಬರೂ ತಮ್ಮ ಬಾಗಿಲ ಬಳಿಯ ಪರದೇಶಿ ಶತ್ರುವನ್ನು ನೋಡದೇ ಉದಾಸೀನ ಮಾಡಿದರು; ತಮ್ಮಲ್ಲಿ ತಾವೇ ಹೊಡೆದಾಡಲಾರಂಭಿಸಿದರು. ಮಹಾಪ್ರಭು ಆ ಟಿಪ್ಪುವಿನ ಮಹಾಮಂತ್ರಿ ಯಾರು ? ಅವನೊಬ್ಬ ಹಿಂದು. ಸ್ವಾತಂತ್ರ್ಯ ಪ್ರವಾದಿ ಈ ಟಿಪ್ಪುವನ್ನು ಶತ್ರುಗಳಿಗೆ ಹಿಡಿದೊಪ್ಪಿಸಿದ ಸ್ವಾಮಿದ್ರೋಹಿ ಇವನೇ ಎಂಬುದನ್ನು ನಾನು ನಾಚಿಕೆಯಿಂದ ಒಪ್ಪಿಕೊಳ್ಳಬೇಕು”
- ಮಹಾತ್ಮಾ ಗಾಂಧಿ
(ಟಿಪ್ಪು ಸ್ಮಾರಕೋತ್ಸವ (1945) ಸಂದರ್ಭದಲ್ಲಿ ಎ.ಜೆ. ಖಲೀಲರಿಗೆ ಬರೆದ ಪತ್ರದಲ್ಲಿ)
*****
ಉಲ್ಲೇಖ: ವಿಶ್ರಾಂತ ನ್ಯಾಯಮೂರ್ತಿಗಳೂ ಬಿಜಾಪುರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಆದ ಸಾಹಿತಿ ಕೋ.ಚೆನ್ನಬಸಪ್ಪನವರು.
********
ರಾಜೇಂದ್ರ ಬುರಡಿಕಟ್ಟಿ
೦೭-೧೧-೨೦೧೭

No comments:

Post a Comment